ನಿಟ್ಟಡೆ: ಸ. ಉ. ಪ್ರಾ. ಶಾಲೆಯಲ್ಲಿ ಜೂ. 2ರಂದು ಶಾಲಾ ಪ್ರಾರಂಭೋತ್ಸವವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ದೀಪ ಬೆಳಗಿಸಿ ಉದ್ಘಾಟಿಸಿದರು. ಎಸ್.ಡಿ.ಎಮ್.ಸಿ ಅಧ್ಯಕ್ಷ ಮಹಮ್ಮದ್ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಶುಭ ಹಾರೈಸಿದರು.

ನಾಮ ನಿರ್ದೇಶನ ಸದಸ್ಯ ಜನಾರ್ಧನ್ ಪೂಜಾರಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇಣೂರು ಹರ್ಷ ಹೆಗ್ಡೆ ಈ ವರ್ಷ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಗಳನ್ನು ಉಚಿತವಾಗಿ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.(ಉಚಿತ ನೋಟ್ ಪುಸ್ತಕದ ಮೌಲ್ಯ ಒಂದು ಲಕ್ಷ ರೂಪಾಯಿ) ಹೊಸದಾಗಿ ಸೇರಿದ ಮಕ್ಕಳಿಗೆ ಕಿರೀಟ ತೊಡಿಸಿ ಪೆನ್ಸಿಲ್ ಕೊಟ್ಟು ಬ್ಯಾಂಡ್ ನೊಂದಿಗೆ ಸ್ವಾಗತ ಮಾಡಲಾಯಿತು. ವೇದಿಕೆಯಲ್ಲಿ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಸ್ವಾತಿ ಹಾಗೂ ಎಲ್ಲಾ ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು. ತಾಯಂದಿರ ಸಮಿತಿಯ ಅಧ್ಯಕ್ಷೆ ಜಯಲಕ್ಷ್ಮಿ, ಶಾಲೆಗೆ ಕೊಡುಗೈ ದಾನಿಗಳಾದ
ಮಹಮ್ಮದ್ ಅಶ್ರಫ್ ಮತ್ತು ಮಹಮದ್ ಲತೀಫ್ ಉಪಸ್ಥಿತರಿದ್ದರು. ಸರಕಾರದಿಂದ ಉಚಿತವಾಗಿ ನೀಡುವ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯನಿ ಆರತಿ ಸ್ವಾಗತಿಸಿ, ಇಲಾಖೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮ ನಿರೂಪಣೆಯನ್ನು ಶಾಲಾ ಶಿಕ್ಷಕಿ ಅನಿತಾ ನಿರ್ವಹಿಸಿದರು. ಶಾಲಾ ಶಿಕ್ಷಕಿಯರು, ಅತಿಥಿ ಶಿಕ್ಷಕರು ಸಹಕಾರ ನೀಡಿದರು. ಶಾಲಾ ಶಿಕ್ಷಕ ಗಣೇಶ್ ವಂದಿಸಿದರು.