ಮುಂಡಾಜೆ: ಸ.ಉ.ಪ್ರಾ. ಶಾಲೆಯಲ್ಲಿ ಜೂ.2ರಂದು ಶಾಲಾ ಪ್ರಾರಂಭೋತ್ಸವ ಇಲಾಖಾ ನಿಯಮದಂತೆ ನೆರವೇರಿತು.
ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಪಂಚಾಯತ್ ಪಿ.ಡಿ.ಓ ಗಾಯತ್ರಿ, ಅಧ್ಯಕ್ಷ ಗಣೇಶ್ ಬಂಗೇರ, ಹಳೆ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.
ಶಾಲೆಗೆ ವಿವಿಧ ಕೊಡುಗೆ ನೀಡಿದ ಸತ್ಯನಾರಾಯಣ ಹೊಳ್ಳ ಉದ್ಯಮಿಗಳು ಬೆಂಗಳೂರು, ಇವರನ್ನು ಸನ್ಮಾನಿಸಲಾಯಿತು. ಪುಸ್ತಕ, ಕೊಡೆ, ವಿತರಣೆ ಮಾಡಲಾಯಿತು. ಸಿಹಿಯೂಟ ನೀಡಲಾಯಿತು.