ಬೆಳ್ತಂಗಡಿ: ಪ್ರತಿಭಾವಂತ ಪ್ರತಿಭೆಗಳ ಅಭಿನಂದನಾ ಕಾರ್ಯಕ್ರಮ

0

ಬೆಳ್ತಂಗಡಿ: ಪೆರಿಂಜೆಯ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಜೂ.1 ರಂದು ಹೊಸಂಗಡಿ, ಬಡಕೋಡಿ ಗ್ರಾಮ ಸಮಿತಿಯ ಹಾಗೂ ನೆರೆಯ ಗ್ರಾಮದ ಪ್ರತಿಭಾವಂತ ಪ್ರತಿಭೆಗಳ ಅಭಿನಂದನಾ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘದ ಸ್ಥಾಪಕ ಅಧ್ಯಕ್ಷ ಎನ್. ಸೀತಾರಾಮ್ ರೈ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಗುರುವಾಯನಕೆರೆ ಬಂಟರ ಸಂಘದ ಮಾಜಿ ಅಧ್ಯಕ್ಷರು, ತಾಲೂಕಿನ ಬಂಟರ ಸಂಘದ ಸಂಚಾಲಕ ಜಯರಾಮ್ ಭಂಡಾರಿ ವಹಿಸಿದ್ದರು. ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಿ ವಿಂಶತಿ ಕಾರ್ಯಕ್ರಮದಲ್ಲಿ ನೃತ್ಯ ತಂಡದ ಮುಂದಾಳತ್ವ ವಹಿಸಿದ್ದ ಸುಜಾತ ಶೆಟ್ಟಿಯವರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಹೊಸಂಗಡಿ ಬಡಕೋಡಿ ಗ್ರಾಮ ಸಮಿತಿಯ ಅಧ್ಯಕ್ಷ ರವಿಚಂದ್ರ ಶೆಟ್ಟಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here