ಧರ್ಮಸ್ಥಳ: ಅರಿವು ಕೇಂದ್ರ ಗ್ರಾಮ ಪಂಚಾಯತ್ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಮೇ. 5ರಿಂದ 10ರಂದು ತನಕ ಹಮ್ಮಿಕೊಳ್ಳಲಾದ ಶಿಬಿರದಲ್ಲಿ ಮಕ್ಕಳಿಗೆ ಮದ್ದಿನ ಗಿಡ ಹಾಗೂ ಎಲೆಗಳ ಪರಿಚಯ ಯೋಗಾಸನ, ಬುಟ್ಟಿನೇಯುವಿಕೆ, ಕ್ರಾಫ್ಟ್, ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತ್ ಗಳ ಪರಿಚಯ ಮತ್ತು ಕಾರ್ಯವೈಖರಿ, ವಿವಿಧ ಯೋಜನೆಗಳ ಬಗ್ಗೆ ಮಾಹಿತಿ, ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಯ ಪ್ರಾತ್ಯಕ್ಷಿಕೆ, ಭಜನೆ ಪೋಸ್ಟ್ ಮಾಸ್ಟರ್ ರಿಂದ ಪತ್ರ ವ್ಯವಹಾರ, ಆಧಾರ್ ಸ್ಪೀಡ್ ಪೋಸ್ಟ್ ಹಾಗೂ ನಾರ್ಮಲ್ ಪೋಸ್ಟಿಗೆ ಇರುವ ವ್ಯತ್ಯಾಸ, ಸುಕನ್ಯಾ ಸಮೃದ್ಧಿ ಯೋಜನೆ ಮುಂತಾದ ವಿಷಯಗಳ ಬಗ್ಗೆ ಮಾಹಿತಿ.

ಬ್ಯಾಂಕ್ ಮ್ಯಾನೇಜರ್ ರವರಿಂದ ಬ್ಯಾಂಕಿನಿಂದ ಸಿಗುವಂತಹ ಸೌಲಭ್ಯಗಳು ಖಾತೆ ತೆರೆಯುವಿಕೆ, ಉಳಿತಾಯ ಮುಂತಾದ ವಿಷಯಗಳ ಬಗ್ಗೆ ಮಾಹಿತಿ, ಹಳೆಯ ಆಟಗಳಾದ ಲಗೋರಿ, ಕುಂಟಬಿಲ್ಲೆ, ಬಳೆ ಆಟ, ಗೋಲಿಯಾಟ, ಗೇರುಬೀಜ ಕುಟ್ಟುವಿಕೆ ಮತ್ತು ರಸಪ್ರಶ್ನೆ, ಸುಡೋಕು, ಗಟ್ಟಿಯಾಗಿ, ಸ್ಪಷ್ಟವಾಗಿ ಓದುವಿಕೆ, ಚಿತ್ರಕಲೆ, ಭಾಷಣ, ಮುಂತಾದ ವಿಷಯಗಳ ಬಗ್ಗೆ ನುರಿತ ಶಿಕ್ಷಕರಿಂದ ಮಾಹಿತಿ.
ಪ್ರಶಂಸನಾ ಪತ್ರವನ್ನು ನೀಡಲಾಯಿತು. ಈ ಎಲ್ಲಾ ಕಾರ್ಯಕ್ರಮವು ಊರಗಣ್ಯರು, ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ, ಸದಸ್ಯರು, ಸಿಬ್ಬಂದಿ ವರ್ಗದವರು, ಮಕ್ಕಳು ಹಾಗೂ ಪೋಷಕರ ಸಹಕಾರದೊಂದಿಗೆ ಉತ್ತಮವಾಗಿ ನೆರವೇರಿತು. ಭಾಗವಹಿಸಿದ ಸುಗಮದಾರರಿಗೆ ಮಕ್ಕಳು ಸ್ವಾಗತ, ಧನ್ಯವಾದಗಳನ್ನು ಕೋರಿದರು.