ಕಲ್ಮಂಜ: ಬಿಲ್ಲವ ಸಂಘದ ಮಾಸಿಕ ಸಭೆ

0

ಕಲ್ಮಂಜ: ಯುವ ಬಿಲ್ಲವ ವೇದಿಕೆ ಅಕ್ಷಯ ನಗರ, ನಿಡಿಗಲ್-ಕಲ್ಮಂಜ ಇದರ ಮಾಸಿಕ ಸಭೆಯು ವಸಂತ ಪೂಜಾರಿ ಪೆಲತ್ತಡಿ ಇವರ ಅಧ್ಯಕ್ಷತೆಯಲ್ಲಿ ಮೇ.31ರಂದು ಪೆಲತ್ತಡಿ ಕಡಂಬು ಮನೆಯಲ್ಲಿ ನಡೆಯಿತು.

ಕಳೆದ 29 ವರ್ಷಗಳಿಂದ ಪ್ರತೀ ತಿಂಗಳು 26 ಮನೆಯ ಸದಸ್ಯರು ಸೇರಿ ಸಭೆಯನ್ನು ನಡೆಸಿಕೊಂಡು ಬರುತ್ತಿದ್ದು ಸಮಾಜಮುಖಿ ಕೆಲಸದ ಜೊತೆಗೆ ಪ್ರತೀ ವರ್ಷದಂತೆ ಈ ವರ್ಷವೂ ಪ್ರತಿಭಾನ್ವಿತ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರು 12 ಮನೆಗಳನ್ನು ಒಟ್ಟು ಸೇರಿಸಿಕೊಂಡು ಪ್ರಾರಂಭವಾದ ಸಂಘಟನೆ 29 ವರ್ಷಗಳಲ್ಲಿ ಸ್ವ ಜಾತಿಯ 26 ಮನೆಗಳನ್ನು ಒಟ್ಟು ಸೇರಿಸಿಕೊಂಡು ಪ್ರತಿ ಮನೆಯಲ್ಲಿ ತಿಂಗಳಲ್ಲಿ ಸೇರುವುದು ಒಂದು ಪುಣ್ಯದ ಕೆಲಸ ಎಂದರು.

ಮುಖ್ಯ ಅತಿಥಿಗಳಾಗಿ ರವಿ ಬಂಗೇರ ಅಕ್ಷಯ ನಗರ, ಜಯಾನಂದ ಪೂಜಾರಿ ಅಂಬಡೆದಡಿ, ಸುದ್ದಿ ಬಿಡುಗಡೆ ಬೆಳ್ತಂಗಡಿ ಇದರ ವರದಿಗಾರರಾದ ನಿಶಾನ್ ಬಂಗೇರ ಹಾಗೂ ಸಂಘದ ಅಧ್ಯಕ್ಷರಾದ ನಿರಂಜನ್ ಪೂಜಾರಿ, ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಉಮೇಶ್ ಪೂಜಾರಿ ಸ್ವಾಗತಿಸಿದರು. ರುಕೇಶ್ ವರದಿ ವಾಚಿಸಿ, ನಾರಾಯಣ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯರು ಸಹಕರಿಸಿದರು. ಅಶೋಕ್ ಪೂಜಾರಿ ಬಳ್ಳಿದಡ್ಡ ವಂದಿಸಿದರು.

LEAVE A REPLY

Please enter your comment!
Please enter your name here