ಬೆಳ್ತಂಗಡಿ: ಧರ್ಮಸ್ಥಳ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಪುದುವೆಟ್ಟಿನ ಬಾಯಿತ್ಯಾರು ಎಂಬಲ್ಲಿ ನಿರ್ಮಾಣವಾದ ಉನ್ನತಿ ಮನೆಯನ್ನು ಕುಸುಮಾರಿಗೆ ಶಾಸಕ ಹರೀಶ್ ಪೂಂಜರ ಸಮ್ಮುಖದಲ್ಲಿ ಮೇ.30ರಂದು ಹಸ್ತಾಂತರ ಮಾಡಲಾಯಿತು.
ಧ.ಕೃ.ಪ.ಸ.ಸಂಘದ ಸದಸ್ಯೆಯಾಗಿರುವ ಕುಸುಮ ಮಣ್ಣಿನ ಗೋಡೆಯ ಶೀಟಿನ ಮನೆಯಲ್ಲಿ ನೆಲೆಸಿದ್ದರು. ಇದನ್ನು ಮನಗಂಡ ಕೃಷಿಪತ್ತಿನ ಆಡಳಿತ ಮಂಡಳಿ ದೇಣಿಗೆ ಸಂಗ್ರಹಿಸಿ 8 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಟ್ಟಿದೆ.
ಇದರ ಹಸ್ತಾಂತರ ಕಾರ್ಯವು ನೆರವೇರಿದ್ದು, ಈ ಸಂದರ್ಭದಲ್ಲಿ ಹಿರಿಯರಾದ ಕುಶಾಲಪ್ಪ ಗೌಡ, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಧರ್ಮಸ್ಥಳ ಸಿ.ಎ ಬ್ಯಾಂಕ್ ಅಧ್ಯಕ್ಷ ಪ್ರೀತಮ್ ಡಿ., ಹಿರಿಯರಾದ ಭುಜಬಲಿ, ಸಿಡಿಓ ಪ್ರತಿಮಾ, ಸಿಎ ಬ್ಯಾಂಕ್ ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ಸಿಇಓ ಶಶಿಧರ, ಪ್ರಮುಖರಾದ ಪೂರ್ಣಕ್ಷ, ಯಶವಂತ್ ಡೆಚ್ಚಾರ್ ಹಾಗೂ ಧರ್ಮಸ್ಥಳ ಸಿಎ ಬ್ಯಾಂಕಿನ ನಿರ್ದೇಶಕರು, ಸಿಬ್ಬಂದಿಗಳು, ಊರವರು, ಇತರರು ಉಪಸ್ಥಿತರಿದ್ದರು.