ಉಜಿರೆ: ಮೇ. 27ರಂದು ಎಸ್.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯ ಶಿಕ್ಷಕರಿಗೆ “ದೇಹ ಮತ್ತು ಮನಸ್ಸಿನ ಹೊಂದಾಣಿಕೆ” ಕಾರ್ಯಗಾರ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ವಿಭಾಗದ ಸೇವಾಭಾರತಿ ಸಂಯೋಜಕ ಹಾಗೂ ‘ದಿಶ’ ಯೋಗ ಸಂಸ್ಕಾರ ಮತ್ತು ಆಧ್ಯಾತ್ಮ ಶಿಕ್ಷಣ ತರಬೇತುದಾರ ಚಂದ್ರಶೇಖರ್ ಪುತ್ತೂರು ಯೋಗಾಭ್ಯಾಸದ ಜೊತೆಗೆ ಮನಸ್ಸಿನ ನಿಯಂತ್ರಣ ವಿಷಯದ ಕುರಿತಾಗಿ ಮಾಹಿತಿ ಹಂಚಿಕೊಂಡರು. ಕಾರ್ಯಗಾರದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲ ಮನ್ಮೋಹನ್ ನಾಯ್ಕ್ ಕೆ.ಜಿ. ವಹಿಸಿದ್ದರು. ಶಿಕ್ಷಕಿ ಮಧುರ ನಿರೂಪಿಸಿದ ಕಾರ್ಯಕ್ರಮದಲ್ಲಿ, ಶಿಕ್ಷಕಿ ಶಮಿಮ್ ಬಾನು ವಂದಿಸಿದರು.
Home ಇತ್ತೀಚಿನ ಸುದ್ದಿಗಳು ಉಜಿರೆ ಎಸ್.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯ ಶಿಕ್ಷಕರಿಗೆ “ದೇಹ ಮತ್ತು ಮನಸ್ಸಿನ ಹೊಂದಾಣಿಕೆ” ಕಾರ್ಯಾಗಾರ