ಗೇರುಕಟ್ಟೆ: ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿರುವುದರಿಂದ ಪ್ರಾಕೃತಿಕ ವಿಕೋಪ, ವಿಪರೀತ ಗಾಳಿ ಮಳೆಯ ಸಂದರ್ಭದಲ್ಲಿ ಅಗತ್ಯ ನೆರವಿಗಾಗಿ ತುರ್ತು ಸೇವೆಗೆ ಗ್ರಾಮ ಪಂಚಾಯತ್ ಮಟ್ಟದ ಕಾಂಗ್ರೆಸ್ ಪಕ್ಷದ ವತಿಯಿಂದ ಟಾಸ್ಕ್ ಫೋರ್ಸ್ ತಂಡವನ್ನು ರಚಿಸಲಾಗಿದೆ. ತುರ್ತು ಸಂದರ್ಭದಲ್ಲಿ ಕಳಿಯ ಮತ್ತು ನ್ಯಾಯತರ್ಪು ಗ್ರಾಮದಲ್ಲಿ ದಿನದ 24 ಗಂಟೆಯು ಸಾರ್ವಜನಿಕರ ಸೇವೆಗೆ ಲಭ್ಯರಿರುತ್ತಾರೆ.
ಕಳಿಯ ಗ್ರಾಮ ವ್ಯಾಪ್ತಿಯಲ್ಲಿ ಅಬ್ದುಲ್ ಕರೀಮ್, ಹರೀಶ್ ಕುಮಾರ್, ರಾಘವ ಹೆಚ್., ಶರತ್ ಕುಮಾರ್, ನೇವಿಲ್ ಮೊರಾಸ್, ಸಿದ್ದೀಕ್ ಜಿ.ಹೆಚ್., ನೀನಾ ಕುಮಾರ್, ಶ್ರೀನಿವಾಸ ಬೆರ್ಕೆತ್ತೋಡಿ, ಮುಸ್ತಫ ಬಟ್ಟೆಮಾರು, ನಝೀರ್ ಎರುಕಡಪ್ಪು, ಅಶ್ರಫ್ ಟ್ಯಾಂಕರ್ ಹಾಗೂ ನ್ಯಾಯತರ್ಪು ಗ್ರಾಮಕ್ಕೆ ಲತೀಫ್ ಪರಿಮ, ಸತೀಶ್ ನಾಯ್ಕ್, ಕೇಶವ ಪೂಜಾರಿ ನಾಳ, ಹರೀಶ್ ಗೌಡ ಕೆರೆಕೋಡಿ, ರಶೀದ್ ಪರಿಮ, ಸಂಶು ಜಾರಿಗೆಬೈಲು, ಹರೀಶ್ ನಾಳ, ಹಕೀಮ್ ಗೋವಿಂದೂರ್ ಆಯ್ಕೆ ಮಾಡಲಾಗಿದೆ.