

ಬೆಳಾಲು: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೂಡಲ ಕೆರೆ ಸಮೀಪದ ಮುಂಡ್ರೊಟ್ಟು ಬಳಿ ಕಾಡಿನ ಒಳಗೆ ಸರಿಸುಮಾರು ಮೂರು ತಿಂಗಳ ಹೆಣ್ಣು ಮಗುವೊಂದು ಪತ್ತೆಯಾದ ಘಟನೆ ಮಾ. 22ರ ಬೆಳಿಗ್ಗೆ 9.15ರ ಹೊತ್ತಿಗೆ ನಡೆದಿದೆ.



ಘಟನೆ ವಿವರ: ಗುಲಾಬಿ ಅನ್ನುವ ಮಹಿಳೆ ಉಜಿರೆಯಿಂದ ಮಾಯದಲ್ಲಿರುವ ತನ್ನ ಮನೆಗೆ ತೆರಳುತ್ತಿರುವ ಸಂಧರ್ಭದಲ್ಲಿ ಮಗು ಅಳುತ್ತಿರುವ ಶಬ್ಧ ಕೇಳಿ ಹೋಗಿ ನೋಡಿದಾಗ ಹೆಣ್ಣು ಮಗು ಕಂಡು ಬಂದಿದೆ. ತಕ್ಷಣ ಬೆಳಾಲು ಗ್ರಾ. ಪಂ. ಅಧ್ಯಕ್ಷೆ ವಿದ್ಯಾ ಅವರಿಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ವಿದ್ಯಾ ಅವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಧರ್ಮಸ್ಥಳ ಆರೋಗ್ಯಾಧಿಕಾರಿ ಮಂಜು ಅವರು ಮಗುವಿನ ಆರೋಗ್ಯ ತಪಾಸಣೆ ಮಾಡಿದ್ದು, ಮಗು ಅರೋಗ್ಯವಾಗಿರುವ ಕುರಿತು ಮಾಹಿತಿ ನೀಡಿದ್ದಾರೆ.