

ಧರ್ಮಸ್ಥಳ: ಕಾತ್ಯಾಯನಿ ಕ್ರಿಯೇಷನ್ಸ್” ಅವರ ನಿರ್ಮಾಣದ “ತೀರ್ಪು” ಟೆಲಿ ಚಿತ್ರ ಯು ಟ್ಯೂಬ್ ಚಾನಲ್ ನಲ್ಲಿ ಯಶಸ್ವಿ ಪಥ ದಲ್ಲಿ ಮುನ್ನಡೆ ಯುತ್ತಿದೆ ಎಂದು ಚಿತ್ರದ ನಿರ್ಮಾಪಕ ನಾಯಕ ನಟ ಉಮೇಶ್ ಪ್ರಭು ಧರ್ಮಸ್ಥಳ ಹೇಳಿದರು. ಅವರು ಮಾ. 20ರಂದು ಕನ್ಯಾಡಿ ಶ್ರೀ ರಾಮ ರೆಸಿಡೆನ್ಸಿ ಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಮಂಗಳೂರು ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಮುಹೂರ್ತವಾದ ಈ ಚಿತ್ರ ಶೇ. 70 ಬೆಳ್ತಂಗಡಿ ತಾಲೂಕಿನಲ್ಲಿ ಮತ್ತು ಸೋಮೇಶ್ವರ ಬೀಚ್, ದೇವರ ಮನೆ, ಚಿಕ್ಕಮಗಳೂರು, ಪಾರ್ಪಿಕಲ್, ಸೋಮಂತಡ್ಕ, ನಿಡ್ಲೆ, ಮೊದಲಾದ ಕಡೆ ಚಿತ್ರೀಕರಣ ನಡೆದಿದೆ. ಮನು ಉಜಿರೆ ನಿರ್ದೇಶನ ಮಾಡುತ್ತಿದ್ದು,ಅವರದೇ ಚಿತ್ರ ಕಥೆ ಬೆಳ್ತಂಗಡಿಯ ಪ್ರಣೀತ್ ಕುಲಾಲ್ ಛಾಯಾಗ್ರಾಹಣ ಜಿ. ಕೃಷ್ಣ ಬೆಳ್ತಂಗಡಿ ಅವರ ಸಂಭಾಷಣೆ ಖ್ಯಾತ ಕಾರ್ ರೇಸರ್ ಆಗಿರುವ ಉಮೇಶ್ ಪ್ರಭು ಧರ್ಮಸ್ಥಳ ಅವರು ಮೊದಲ ಬಾರಿ ನಾಯಕರಾಗಿ ಸಿನಿಲೋಕಕ್ಕೆ ಕಾಲಿಟ್ಟಿದ್ದಾರೆ.

ಮುಖ್ಯ ಪಾತ್ರದಲ್ಲಿ ನಾಟ್ಯ ವಿದುಷಿ ಶಾಂಭವಿ ಆಚಾರ್ಯ ಉಡುಪಿ, ಚಂದನ್ ಕಾಮತ್, ಶಿವಪ್ಪ ಬಿರ್ವ, ಶಶಿ, ಸುಮಂತ್ ಶೆಟ್ಟಿ, ಪ್ರೀತಮ್ ಶೆಟ್ಟಿ, ದೀಕ್ಷಿತಾ ಪೂಜಾರಿ ಹಾಗೂ ಧರ್ಮಸ್ಥಳದ ಯುವಕರ ತಂಡ ಈ ತೀರ್ಪು ಟೆಲಿ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಹಾಡು ಅಭಿಷೇಶ್ ಧರ್ಮಸ್ಥಳ ಹಾಡಿದ್ದಾರೆ, ನಿರ್ವಹಣೆ ದೇವದಾಸ್ ಪ್ರಭು ಮಾಡುತ್ತಿದ್ದಾರೆ. ಸುಮಾರು ರೂ. 9.5ಲಕ್ಷ ವೆಚ್ಚ ದಲ್ಲಿ ನಿರ್ಮಾಣ ಗೊಂಡಿದೆ. 43 ನಿಮಿಷದ ಟೆಲಿ ಚಿತ್ರವಾಗಿದ್ದು ಮಾ. 7ರಂದು ಯುಟ್ಯೂಬ್ ನಲ್ಲಿ ಬಿಡುಗಡೆ ಗೊಂಡಿದ್ದು ಸಾವಿರಾರು ಮಂದಿ ವೀಕ್ಷಿಸಿ ಮೆಚ್ಚಿ ಪ್ರೋತ್ಸಾಹ ನೀಡಿದ್ದಾರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಮನು ಉಜಿರೆ, ಪ್ರೋತ್ಸಾಹಕ ಗ್ರೇಸಿಯನ್ ವೇಗಸ್, ನಟರಾದ ಶಿವಪ್ಪ ಬಿರ್ವ, ಸುಮಂತ್ ಶೆಟ್ಟಿ, ರಾಘವೇಂದ್ರ, ದೀಕ್ಷಿತಾ ಪೂಜಾರಿ, ರಮಾನಂದ ಶೆಟ್ಟಿ, ಕ್ಯಾಮರಾ ಮೆನ್ ಪ್ರಣೀತ್ ಕುಲಾಲ್, ಪ್ರೊಜೆಕ್ಟ್ ಮೆನೇಜರ್ ಜಿ. ದೇವದಾಸ್ ಪ್ರಭು, ಉಪಸ್ಥಿತರಿದ್ದರು.