ಬೆಳ್ತಂಗಡಿ: ಶ್ರೀ ಮಹಮ್ಮಾಯಿ ದೇವಸ್ಥಾನ ಕಣಿಯೂರಿನ ಸಂಭ್ರಮ ಕ್ರಿಯೇಷನ್ ಅರ್ಪಿಸುವ ಕಣಿಯೂರು ಶ್ರೀ ಮಹಮ್ಮಾಯಿ ಪುರ್ಸಾದ ಎಂಬ ತುಳು ಭಕ್ತಿಗೀತೆಯನ್ನು ದರ್ಶನದ ಪಾದ್ರಿಗಳಾದ ಬೊಮ್ಮಣ್ಣ ನಾಯ್ಕ ಮಾಚಾರು ಇವರು ಬಿಡುಗಡೆ ಮಾಡಿದರು.

ಈ ಗೀತೆಯ ಸಾಹಿತ್ಯವನ್ನು ನಿರಂಜನ್ ಗುರುವಾಯನಕೆರೆ, ಹಾಡಿದ ಯುವ ಗಾಯಕ ಪ್ರದೀಪ್ ನಾಯ್ಕ ಕರಾಯ ಹಾಗೂ ಸಂಕಲನವನ್ನು ಶರತ್ ನಾಯ್ಕ ಕೊರಂಟಾಜೆ ಮಾಡಿರುತ್ತಾರೆ. ದೇವಸ್ಥಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.