ಮಾಚಾರಿನಲ್ಲಿ ವಾತ್ಸಲ್ಯ ಮನೆಗೆ ಕೆಸರು ಕಲ್ಲು

0


ಉಜಿರೆ: ಗ್ರಾಮದ ಮಾಚಾರಿನಲ್ಲಿ ಹೇಮಾವತಿ ಹೆಗ್ಗಡೆಯವರ ಕನಸಿನ ಕೂಸು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಾತ್ಸಲ್ಯ ಮನೆಗೆ ಕೆಸರು ಕಲ್ಲು ಹಾಕಿ ಮನೆ ನಿರ್ಮಾಣದ ಕೆಲಸಕ್ಕೆ ಚಾಲನೆ ನೀಡಲಾಯಿತು.

ಉಜಿರೆ ವಲಯ, ಮಾಚಾರು ಕಾರ್ಯಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಪ್ರತಿ ತಿಂಗಳು ಮಾಸಾಸನ ನೀಡುತ್ತಿರುವ ವಾತ್ಸಲ್ಯ ಸದಸ್ಯ ಕೂಸಪ್ಪರವರ ಈ ಹಿಂದಿನ ಮನೆಯಲ್ಲಿ ವಾಸಿಸಲು ಕಷ್ಟಕರವಾಗುವಂತಹ ಸ್ಥಿತಿಯಲ್ಲಿ ಆ ಮನೆಯು ಇದ್ದು, ಇದರ ಬಗ್ಗೆ ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಯೋಜನೆಯ ಕಾರ್ಯಕರ್ತರೊಂದಿಗೆ ಸೇರಿಕೊಂಡು ಇವರ ಮನೆ ಭೇಟಿ ಮಾಡಿ ಯೋಜನೆಯ ಮೂಲಕ ಹೇಮಾವತಿ ಹೆಗ್ಗಡೆಯವರಿಗೆ ವರದಿಯನ್ನು ನೀಡಿ, ಇದನ್ನು ಮನಗಂಡ ವಾತ್ಸಲ್ಯ ಮನೆ ನಿರ್ಮಾಣವನ್ನು ಮಾಡುವಂತೆ ವಿಶೇಷವಾಗಿ ಮಂಜುರಾತಿಯನ್ನು ನೀಡಿ, ಫೆ.16ರಂದು ಒಕ್ಕೂಟ ವಲಯಧ್ಯಕ್ಷ ಉಮಾರಬ್ಬ, ಬದನಾಜೆ ಒಕ್ಕೂಟದ ಅಧ್ಯಕ್ಷ ಸುರೇಂದ್ರ, ಮಾಚಾರು ಒಕ್ಕೂಟದ ಉಪಾಧ್ಯಕ್ಷ ರಮೇಶ್ ನಾಯ್ಕ, ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು, ತಾಲೂಕಿನ ಜ್ಞಾನ ವಿಕಾಸ ಸಮನ್ವಯಧಿಕಾರಿ ಮಧುರ ವಸಂತ್, ವಲಯ ಮೇಲ್ವಿಚಾರಕಿ ವನಿತಾ, ಸೇವಾಪ್ರತಿನಿಧಿ ಹೇಮಲತಾ,, ಮೇಸ್ತ್ರಿ ಸುರೇಶ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here