ಪದ್ಮುಂಜ: ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಚಿಣ್ಣರ ವಣ್ಯ ದರ್ಶನ ಉಚಿತ ಪ್ರವಾಸ ಕಾರ್ಯಕ್ರಮ

0

ಪದ್ಮುಂಜ: ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯ ವತಿಯಿಂದ ಚಿಣ್ಣರ ವಣ್ಯ ದರ್ಶನ ಕಾರ್ಯಕ್ರಮದ ಪ್ರಯುಕ್ತ ನ. 21 -22 ರಂದು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಪ್ರವಾಸ. ನ. 21ರಂದು ಸರಕಾರಿ ಪ್ರೌಡ ಶಾಲೆಯಿಂದ ಹೊರಡಲಾಯ್ತು ಶಾಲೆಯಿಂದ ಹೊರಟು ಕುಪ್ಪೆಟ್ಟಿ ಗುರುವಾಯನಕೆರೆ, ಕಾರ್ಕಳ, ಬಜಗೋಳಿ ಮಾರ್ಗವಾಗಿ ಕುದುರೆಮುಖ ನಿಸರ್ಗದಾಮಕ್ಕೆ ಹೋಗಿ ಅರಣ್ಯ ಇಲಾಖೆಯವರು ಸೂಚಿಸಿದ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಲಾಗುತ್ತದೆಂದು ತಿಳಿದುಬಂದಿದೆ. ವಿಧ್ಯಾರ್ಥಿಗಳೊಂದಿಗೆ ಮುಖ್ಯ ಶಿಕ್ಷಕಿ ಸುಮತಿ ಪಿ.ಎನ್., ಅಧ್ಯಾಪಕರಾದ ಗಾಯತ್ರಿ, ವಿನಯ್, ಅನಂತ ಕ್ರಷ್ಣ ಹೋಗಿರುತ್ತಾರೆ.

LEAVE A REPLY

Please enter your comment!
Please enter your name here