ನಿಡ್ಲೆ: ನಿಡ್ಲೆ ಕೆನರಾ ಬ್ಯಾಂಕ್ ಇವರ ವತಿಯಿಂದ ನಿಡ್ಲೆ ಸರ್ಕಾರಿ ಪ್ರೌಢಶಾಲೆಯ ಶಾಲಾ ಮಕ್ಕಳಿಗೆ ಗಾಂಧಿ ಜಯಂತಿ ಪ್ರಯುಕ್ತ ಚಿತ್ರಕಲೆ ಸ್ಪರ್ಧೆ

0

ನಿಡ್ಲೆ: ನಿಡ್ಲೆ ಕೆನರಾ ಬ್ಯಾಂಕ್ ಇವರ ವತಿಯಿಂದ ನಿಡ್ಲೆ ಸರ್ಕಾರಿ ಪ್ರೌಢಶಾಲೆಯ ಶಾಲಾ ಮಕ್ಕಳಿಗೆ ಗಾಂಧಿ ಜಯಂತಿ ಪ್ರಯುಕ್ತ ಗಾಂಧೀಜಿಯವರ ಚಿತ್ರಕಲೆ ಸ್ಪರ್ಧೆಯನ್ನು ಅ.1ರಂದು ಏರ್ಪಡಿಸಿದ್ದರು.

ಇದೇ ಸಂದರ್ಭದಲ್ಲಿ ಶಾಲಾ ಪರಿಸರದಲ್ಲಿ ಬ್ಯಾಂಕ್ ನ ವತಿಯಿಂದ ಗಿಡಗಳನ್ನು ನೆಡಲಾಯಿತು. ಪ್ರಥಮ ಬಹುಮಾನವನ್ನು ಸ್ವಾತಿ ಹತ್ತನೇ ತರಗತಿ, ದ್ವಿತೀಯ ಬಹುಮಾನವನ್ನು ನಿಶಾಂತ್ 10ನೇ ತರಗತಿ, ತೃತೀಯ ಬಹುಮಾನವನ್ನು ಮೋಕ್ಷಿತ್ ಒಂಬತ್ತನೇ ತರಗತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಬ್ಯಾಂಕಿನ ಮ್ಯಾನೇಜರ್ ಶ್ರೀನಾಥ್ ಸಿಬ್ಬಂದಿಗಳಾದ ಭಾಗ್ಯರಾವ್ ಸುಧೀರ್, ಚಂದ್ರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರು ಸ್ವಾಗತಿಸಿ, ಶೋಲಿ ವಂದಿಸಿದರು. ಶರತ್ ಕುಮಾರ್ ನಿರ್ವಹಿಸಿದರು. ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here