ಕೊಯ್ಯೂರು: ಶಾಲಾ ಹಳೇ ವಿದ್ಯಾರ್ಥಿ ಸಂಘದ ಸಭೆ ಮತ್ತು ಪದಾಧಿಕಾರಿಗಳ ರಚನೆ

0

ಕೊಯ್ಯೂರು: ದ.ಕ.ಹಿ.ಪ್ರಾ.ಶಾಲಾ ಕೊಯ್ಯೂರು ದೇವಸ್ಥಾನ ಹಳೆ ವಿದ್ಯಾರ್ಥಿ ಸಂಘದ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಅ.26ರಂದು ಸ.ಹಿ.ಪ್ರಾ.ಶಾಲೆ ಕೊಯ್ಯೂರು ದೇವಸ್ಥಾನ ಶಾಲೆಯಲ್ಲಿ ಜರಗಿತು.ವೇದಿಕೆಯಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷ ಸುಧಾಕರ ದೇವಾಡಿಗ, ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೇಶವ ಕಂಗಿತ್ತಿಲು, ಕೊಯ್ಯೂರು ಸಹಕಾರಿ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಅನಂತ್‌ಕೃಷ್ಣ ಭಟ್, ಕೊಯ್ಯೂರು ಸಹಕಾರಿ ಬ್ಯಾಂಕಿನ ಅಧ್ಯಕ್ಷ ನವೀನ್ ವಾದ್ಯಕೋಡಿ, ಗ್ರಾಮ ಪಂಚಾಯತ್ ಸದಸ್ಯೆ ವಿಶಾಲಾಕ್ಷಿ ಮತ್ತು ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಜಯಂತಿ ಉಪಸ್ಥಿತರಿದ್ದರು.

ಹಳೇ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಚಂದ್ರಶೇಖರಗೌಡ ಮಾವಿನಕಟ್ಟೆ, ಉಪಾಧ್ಯಕ್ಷರಾಗಿ ನೋಣಯ್ಯ ಪೂಜಾರಿ ಮತ್ತು ಅದಿತಿ ಕಾರ್ಯದರ್ಶಿಯಾಗಿ ವಿನಾಯಕ ಬೆದ್ರಲ್ಕೆ, ಜೊತೆ ಕಾರ್ಯದರ್ಶಿಯಾಗಿ ದೀಕ್ಷಿತ್ ಅರಂತೊಟ್ಟು ಮತ್ತು ರವಿಚಂದ್ರ ಮತ್ತು ಕೋಶಾಧಿಕಾರಿಯಾಗಿ ಸದಾನಂದ ಅಡೆಂಕಿಲೊಟ್ಟು, ಗೌರವ ಸಲಹೆಗಾರರಾಗಿ ಅಶೋಕ್ ಭಟ್, ನವೀನ್ ವಾದ್ಯಕೋಡಿ, ಡೀಕಯ್ಯ ಪೂಜಾರಿ ಗುರ್ಬೊಟ್ಟು, ಅನಂತ್ ಕೃಷ್ಣ ಭಟ್ ಮತ್ತು ಶಾಲಾ ಮುಖ್ಯೋಪಾದ್ಯಾಯಿನಿ ಶ್ಯಾಮಲಾ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರ ಸೀತಾರಾಮ್ ಗೌಡ ಬೆಳಾಲು ಮತ್ತು ಶಿಕ್ಷಕಿ ಚೇತನಾ ಕಾರ್ಯಕ್ರಮವನ್ನು ನಿರ್ವಹಿಸಿಕೊಟ್ಟರು.

LEAVE A REPLY

Please enter your comment!
Please enter your name here