ಚಿಬಿದ್ರೆ-ತೋಟತ್ತಾಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಗರಿಷ್ಠ ಅನುದಾನ ನೀಡುವಂತೆ ರಕ್ಷಿತ್ ಶಿವರಾಂರಿಗೆ ಮನವಿ

0

ಚಿಬಿದ್ರೆ: ತೋಟತ್ತಾಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂದಾಜು 80 ಲಕ್ಷದ ಸಮುದಾಯ ಭವನಕ್ಕೆ ಕರ್ನಾಟಕ ಸರ್ಕಾರದಿಂದ ಗರಿಷ್ಠ ಅನುದಾನ ನೀಡುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮೂಲಕ ಸರ್ಕಾರಕ್ಕೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ತೋಟತ್ತಾಡಿ ಇದರ ಅಧ್ಯಕ್ಷ ಸನತ್ ಕುಮಾರ್ ಮೂರ್ಜೆ ನಿಯೋಗದಿಂದ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ನಿಯೋಗದಲ್ಲಿ ಸಂಘದ ಕಾರ್ಯದರ್ಶಿ ಹರೀಶ್ ಪೂಜಾರಿ ಚಿಬಿದ್ರೆ, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಪ್ರೇಮ ಹೊಸಮನೆ, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಸುಕೇಶ್ ಪೂಜಾರಿ ಪರಾರಿ, ಸಂಘದ ಪದಾಧಿಕಾರಿಗಳಾದ ಸೀತಾರಾಮ ಕಜೆ, ಓಬಯ್ಯ ಪೂಜಾರಿ ಅಂತರ, ದಯಾನಂದ ಪೂಜಾರಿ ಗುವೆದಕಂಡ, ಗಿರೀಶ್ ಪೂಜಾರಿ ಪೊಯ್ಯೇದಡ್ಡ, ಸತೀಶ್ ಪೂಜಾರಿ ಮೂರ್ಜೆ, ಉಷಾ ಡಿ.ಮಜಲು, ವಿನುತಾ ಡಿ.ಮಜಲು ಹರಿಣಾಕ್ಷಿ ಡಿ.ಮಜಲು, ಪ್ರಮೀಳಾ ದೇಜಪ್ಪ ಕಕ್ಕಿಂಜೆ, ಪ್ರೇಮ ಬರಮೇಲು, ಶೋಭಾ ಬರಮೇಲು, ಸುಮತಿ ಬರಮೇಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here