ನಾಲ್ಕೂರಿನಲ್ಲಿ ಚರಂಡಿ ರಿಪೇರಿ ಮಾಡಿದ ಗ್ರಾಮಸ್ಥರು

0

ಬಳಂಜ: ನಾಲ್ಕೂರು ಗ್ರಾಮದ ನಿಟ್ಟಡ್ಕ ಎಂಬಲ್ಲಿ ಚರಂಡಿಯಲ್ಲಿ ಮಣ್ಣು ಮತ್ತು ಕಸ ಕಡ್ಡಿಗಳು ತುಂಬಿ ಮಳೆಗಾಲದಲ್ಲಿ ನೀರು ಹೋಗಲು ಸಮಸ್ಯೆಯಾಗಿ ಇಡೀ ಮಾರ್ಗದಲ್ಲಿ ನೀರು ತುಂಬಿಕೊಂಡಿತ್ತು.

ಇದನ್ನು ಗಮನಿಸಿದ ಸ್ಥಳೀಯರಾದ ಸಂತೋಷ್ ಹಿಮರಡ, ಸೀತಾರಾಮ ಪೂಜಾರಿ, ರಾಕೇಶ್, ಬೇಬಿ ಪರವ ಸೇರಿಕೊಂಡು ಮೋರಿ ರಿಪೇರಿ ಮತ್ತು ಚರಂಡಿ ರಿಪೇರಿಯನ್ನು ಶ್ರಮದಾನ ಮೂಲಕ ಮಾಡಿದರು.

ಗ್ರಾಮ ಪಂಚಾಯತ್ ನವರು ಮಾಡಬೇಕಾದ ಇಂತಹ ಕೆಲಸಗಳನ್ನು ಗ್ರಾಮಸ್ಥರು ಮಾಡಿರುವುದನ್ನು ಗಮನಿಸಿದ ಸಾರ್ವಜನಿಕರು ಇವರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here