ಕನ್ಯಾರಕೋಡಿ-ತಿಮರಡ್ಡ ರಸ್ತೆ ಬದಿ ಕುಸಿತ- ಸಮಸ್ಯೆ ಬಗೆಹರಿಸಲು ಸಾರ್ವಜನಿಕರ ಆಗ್ರಹ

0

ಇಳಂತಿಲ: ಇಳಂತಿಲ ಗ್ರಾಮ ಪಂಚಾಯತ್ 1ನೇ ಬ್ಲಾಕ್‌ನ ಕನ್ಯಾರಕೋಡಿಯಿಂದ ತಿಮರಡ್ಡ ಎಂಬಲ್ಲಿ ಸುಮಾರು 15 ಮನೆಗಳಿಗೆ ಹೋಗುವ ಸಾರ್ವಜನಿಕ ರಸ್ತೆ ತುಂಬಾ ವರುಷದಿಂದ ದುರಸ್ತಿ ಕಾಣದೆ ಇದೆ. ಮಳೆಗಾಲದಲ್ಲಿ ಕೆಸರುಮಾಯವಾಗಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಸಾರ್ವಜನಕರಿಗೆ ನಡೆದುಕೊಂಡು ಹೋಗಲು ಅಸಾದ್ಯ ರೀತಿಯಲ್ಲಿದೆ.

ಈ ರಸ್ತೆಯಲ್ಲಿ ಇಳಂತಿಲ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳು ಹಾಗೂ ಕನ್ಯಾರಕೋಡಿ ಅಂಗನವಾಡಿಗೆ ಹೋಗುವ ಮಕ್ಕಳು ದಿನಲೂ ಕಷ್ಟ ಅನುಭವಿಸುತ್ತಿದ್ದಾರೆ. ತಿಮರಡ್ಡದಿಂದ ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯ ದೇವಾಸ್ಥಾನಕ್ಕೆ ಹೋಗುವ ಸಾರ್ವಜನಿಕರ ಕಾಲು ದಾರಿ ಒಂದು ವಾರದ ಹಿಂದೆ ಸುರಿದ ಬಾರೀ ಮಳೆಗೆ ಗುಡ್ಡಜರಿದು ಹಾನಿ ಆಗಿದೆ. ಇದೆಲ್ಲಾ ಸಮಸ್ಯೆಗಳನ್ನ ಸ್ಥಳಿಯ ಆಡಳಿತಕ್ಕೆ ತಿಳಿಸಿದರು ಬಗೆಹರಿದಿರುವುದಿಲ್ಲ. ಸಮಸ್ಯೆ ಎಂದು ಬಗೆಹರಿಯುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here