ಕೊಲ್ಲಿ: ಮಾರಕಾಸ್ತ್ರದಿಂದ ಮಹಿಳೆ ಮೇಲೆ ಹಲ್ಲೆ

0

ಬೆಳ್ತಂಗಡಿ: ಕುಡಿದ ಮತ್ತಿನಲ್ಲಿ ಮಹಿಳೆ ಮೇಲೆ ವ್ಯಕ್ತಿಯೊಬ್ಬರು ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಘಟನೆ ಜೂ.18ರಂದು ಮಿತ್ತಬಾಗಿಲು, ಗ್ರಾಮದ ಗಂಪದಕೋಡಿ, ಮರುವದಡಿ ಎಂಬಲ್ಲಿ ನಡೆದಿದೆ.

ಮಿತ್ತಬಾಗಿಲು ಗ್ರಾಮದ ಬಿಜೆಪಿ ಬೂತ್ ಸಮಿತಿ ಮಾಜಿ ಅಧ್ಯಕ್ಷ ವಸಂತ ಪೂಜಾರಿ ಗಂಪದಕೋಡಿ (50ವ) ಎಂಬ ವ್ಯಕ್ತಿ ಉಷಾ (40ವ) ಎಂಬ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ವಸಂತ ಪೂಜಾರಿ ಎಂಬವರು ಉಷಾರವರಿಗೆ ಚಿಕ್ಕಪ್ಪ ಆಗಿದ್ದು ಕ್ಷುಲ್ಲಕ ಕಾರಣಕ್ಕಾಗಿ ಮಹಿಳೆಗೆ ಹಲ್ಲೆ ಮಾಡಿದ್ದಾರೆ.

ಗಾಯಾಳು ಉಷಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

LEAVE A REPLY

Please enter your comment!
Please enter your name here