ಶಶಿರಾಜ್ ಶೆಟ್ಟಿಯವರ ಅಜ್ಜಿ ಹೇಮಾವತಿ ಶೆಟ್ಟಿ ಹೃದಯಾಘಾತದಿಂದ ನಿಧನ- ಮೊಮ್ಮಗನ ಬಂಧನದಿಂದ ನೊಂದಿದ್ದ ಅಜ್ಜಿ

0

ಬೆಳ್ತಂಗಡಿ: ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಆರೋಪದಡಿ ಬಂಧಿತರಾಗಿರುವ ಮೇಲಂತಬೆಟ್ಟು ಗ್ರಾಮದ ಕಡಂಬು ನಿವಾಸಿ, ಬಿಜೆಪಿ ಯುವಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿಯವರ ಅಜ್ಜಿ ಪೆರ್ನೆ ಮುಂಡೋವಿನಕೋಡಿಯ ಹೇಮಾವತಿ ಶೆಟ್ಟಿ(76ವ)ರವರು ಹೃದಯಾಘಾತಕ್ಕೀಡಾಗಿ ಮೇ 26ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಶಶಿರಾಜ್ ಶೆಟ್ಟಿಯವರನ್ನು ಬಹುವಾಗಿ ಪ್ರೀತಿಸುತ್ತಿದ್ದ ಹೇಮಾವತಿ ಶೆಟ್ಟಿಯವರು ಕಳೆದ ಕೆಲವು ದಿನಗಳಿಂದ ತೀರಾ ಮಂಕಾಗಿದ್ದರು. ಪದೇ ಪದೇ ಶಶಿರಾಜ್ ಎಲ್ಲಿದ್ದಾನೆ ಎಂದು ಕೇಳುತ್ತಿದ್ದರು. ಅವನನ್ನು ನೋಡಬೇಕು ಎಂದು ಹೇಮಾವತಿ ಶೆಟ್ಟಿ ಹೇಳುತ್ತಿದ್ದರು. ಶಶಿರಾಜ್ ಶೆಟ್ಟಿಯವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ತಿಳಿದ ಬಳಿಕ ಹೇಮಾವತಿ ಶೆಟ್ಟಿ ತೀವ್ರವಾಗಿ ನೊಂದುಕೊಂಡಿದ್ದರು. ಅನಾರೋಗ್ಯದಿಂದಿದ್ದ ಹೇಮಾವತಿ ಶೆಟ್ಟಿಯವರು ಮೇ 26ರಂದು ದಿಢೀರ್ ಹೃದಯಾಘಾತಕ್ಕೀಡಾಗಿ ನಿಧನರಾದರು.

ಮೃತರು ಮಕ್ಕಳಾದ ಪುಷ್ಪಲತಾ ಶೆಟ್ಟಿ, ಜಯಂತಿ ಶೆಟ್ಟಿ, ಶ್ಯಾಮಲ ಶೆಟ್ಟಿ, ಸತೀಶ್ ಶೆಟ್ಟಿ, ಕಿರಣ್ ಶೆಟ್ಟಿ, ಅಳಿಯಂದಿರಾದ ಪುರಂದರ ಶೆಟ್ಟಿ, ಪದ್ಮನಾಭ ಶೆಟ್ಟಿ, ಸೊಸೆಯಂದಿರಾದ ರೇಖಾ ಶೆಟ್ಟಿ, ಸುರೇಖಾ ಶೆಟ್ಟಿ, ನಳಿನಿ ಶೆಟ್ಟಿ, ಮೊಮ್ಮಕ್ಕಳಾದ ಪುಷ್ಪರಾಜ್ ಶೆಟ್ಟಿ, ಶಶಿರಾಜ್ ಶೆಟ್ಟಿ, ಶ್ರೀರಾಜ್ ಶೆಟ್ಟಿ, ಶ್ರೇಯಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಸಹನಾ ಶೆಟ್ಟಿ, ಆಶಿತಾ ಶೆಟ್ಟಿ, ಅಕ್ಷಯ್ ಶೆಟ್ಟಿ, ಅಕ್ಷತಾ ಶೆಟ್ಟಿ, ಆದಿತ್ಯ ಶೆಟ್ಟಿ, ವಿದ್ವತ್ ಶೆಟ್ಟಿ, ಹೃನ್ಮಯಿ ಶೆಟ್ಟಿ, ಅತ್ರೇಯ ಶೆಟ್ಟಿ, ಧನ್ವಿ ಶೆಟ್ಟಿ, ಧಿಯ ಶೆಟ್ಟಿ, ಮರಿಮಕ್ಕಳಾದ ಹಿಮಾನಿ ಶೆಟ್ಟಿ, ಕಶ್ವಿ ಶೆಟ್ಟಿ, ಧ್ಯಾನ ಶೆಟ್ಟಿ ಮತ್ತು ಪ್ರದ್ಯುಮ್ನ ಶೆಟ್ಟಿಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here