ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ, ಪುರೋಹಿತ ಪರಿಷತ್ ವತಿಯಿಂದ ಗೋವಿಗೆ ಮೇವು ಸಹಾಯಹಸ್ತ

0

ಬೆಳ್ತಂಗಡಿ :ಅಖಿಲ ಕರ್ನಾಟಕ ಬ್ರಾಹ್ಣಣ ಅರ್ಚಕ ಮತ್ತು ಪುರೋಹಿತರ ಪರಿಷತ್ ಬೆಂಗಳೂರು ದ.ಕ ಜಿಲ್ಲೆ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೋವಿಗಾಗಿ ಮೇವು ಕಾರ್ಯಕ್ರಮವನ್ನು ಹಮ್ಮಿಕೊಂಡು ಎ.19ರಂದು ಉಡುಪಿ ಜಿಲ್ಲೆಯ ನೀಲಾವರ ಗೋಶಾಲೆಗೆ ಗೋಗ್ರಾಸ ರೂಪದಲ್ಲಿ ಸದಸ್ಯರಿಂದ ಸಂಗ್ರಹವಾದ 23,500/- ರೂಪಾಯಿಗಳನ್ನು ಗೋಶಾಲಾ ಕಛೇರಿಯಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ರವಿಕುಮಾರ್ ಭಟ್ ಪಜಿರಡ್ಕ, ಕಾರ್ಯದರ್ಶಿ ಕೃಷ್ಣ ಐತಾಳ್ ಪಂಜಿರ್ಪು, ಖಜಾಂಚಿ ರಾಜೇಶ್ ಹೊಳ್ಳ ಪಜಿರಡ್ಕ, ಹಾಗೂ ಇತರ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here