ಹೊಸಂಗಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

0

ಹೊಸಂಗಡಿ: ಪ್ರೆಂಡ್ಸ್ ಕ್ಲಬ್ ಸಭಾಭವನದಲ್ಲಿ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಂಗಡಿ-ಬಡಕೋಡಿ ಬೂತ್ ಮಟ್ಟದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಎ.11ರಂದು ನಡೆಯಿತು.

ಮಂಗಳೂರು ಲೋಕಸಭಾ ಚುನಾವಣಾ 2024 ಪ್ರಯುಕ್ತ ಬೂತ್ ಮಟ್ಟದ ಪಕ್ಷದ ಕಾರ್ಯಕರ್ತರ ಸಭೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಸತೀಶ್ ಬಂಗೇರ ಕಾಶಿಪಟ್ಣ ರವರ ಅಧ್ಯಕ್ಷತೆಯಲ್ಲಿ ಜರಗಿತು. ಅವರು ಮಾತಾಡಿ ಗ್ಯಾರಂಟಿ ಯೋಜನೆಗಳಿಂದ ಬಡವರ ಮನೆ ಬೆಳಕನ್ನು ಕಂಡಿದೆ.

ಗ್ಯಾರಂಟಿ ಯೋಜನೆಗಳಿಂದ ಬಡವರು ಹೊರಗೆ ಉಳಿಯಬಾರದು, ವಿಶೇಷವಾಗಿ ಪ್ರತಿ ಮಹಿಳೆಯರಿಗೆ ರೂ.2000 ಬರಲೇಬೇಕು ಒಂದೊಮ್ಮೆ ತಾಂತ್ರಿಕ ದೋಷಗಳಿಂದ ಸಮಸ್ಯೆ ಇದ್ದಲ್ಲಿ ಅದನ್ನು ಸರಿಪಡಿಸುವರೇ ಮಹಿಳೆಯ ವಿವರ ಪಡೆಯಬೇಕೆಂದು ಸೂಚಿಸಿ ಅಭ್ಯರ್ಥಿ ಪದ್ಮರಾಜ್ ರವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಶೇಖರ್ ಕುಕ್ಕೇಡಿ ಚುನಾವಣಾ ಪ್ರಚಾರ ಹಾಗು ಸರಕಾರದ 5 ಗ್ಯಾರಂಟಿಗಳ ಬಗ್ಗೆ ಪ್ರತಿ ಮನೆಗೆ ಹೋಗಿ ವಿಚಾರಿಸಿ ಸಮಸ್ಯೆ ಇದ್ದಲ್ಲಿ ಪರಿಸುವರೇ ಮಾಹಿತಿಯನ್ನು ಪಡೆಯಬೇಕೆಂದು ಕರೆ ನೀಡಿದರು. ಪದ್ಮರಾಜ್ಆರ್ ಪೂಜಾರಿಯವರನ್ನು ಅತ್ಯಂತ ಹೆಚ್ಚು ಮತಗಳಿಂದ ಗೆಲ್ಲಿಸುವಂತೆ ಕಾರ್ಯಕರ್ತರು ಶ್ರಮಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹೊಸಂಗಡಿ ಪಂಚಾಯತ್ ವ್ಯಾಪ್ತಿಯ ಉಸ್ತುವಾರಿ ಬಾಲಕೃಷ್ಣ ಭಟ್, ಬ್ಲಾಕ್ ಯುವ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಸುದರ್ಶನ್ ಶೆಟ್ಟಿ , ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಂದನಾ ಭಂಡಾರಿ,ಬೆಳ್ತಂಗಡಿ ತಾಲೂಕು ಭೂನ್ಯಾಯ ಮಂಡಳಿ ಸರಕಾರಿ ನಾಮ ನಿರ್ದೇಶಿತ ಸದಸ್ಯ ಇಸ್ಮಾಯಿಲ್ ಕೆ ಪೆರಿಂಜೆ, ಪ್ರಮುಖರಾದ ಅಬ್ದುಲ್ ರಹಿಮಾನ್ ಕಟ್ಟೆ, ಅಲಿಯಬ್ಬ ಪುಲಬೆ, ಸುದರ್ಶನ್ ಮಂಜಿಲ ,ಖಾಲಿದ್ ಪುಲಾಬೆ, ಪಂಚಾಯತ್ ಸದಸ್ಯೆ ಜೆ. ಶಾಂತ, ಮೊಹಮ್ಮದ್ ಶಾಫಿ ಕಿರೋಡಿ, ದಿನೇಶ್ ಸಾಲಿಯಾನ್, ಭೋಜಶೆಟ್ಟಿ ಬಡಕೋಡಿ, ಗುರು ಬಡಕೋಡಿ, ಪ್ರಶಾಂತ್ ನಾಯ್ಕ್ ಬಡಕೋಡಿ, ಅಕ್ಕು, ಜನಾರ್ಧನ್ ಕೊಂಜಾಲಗುರಿ ಸೇರಿದಂತೆ ಕಾರ್ಯಕರ್ತರು ಮುಖಂಡರುಗಳು ಉಪಸ್ಥಿತರಿದ್ದರು.

ಹೊಸಂಗಡಿ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹರಿಪ್ರಸಾದ್ ಧನ್ಯವಾದವಿತ್ತರು. ಬಡಕೋಡಿಯ ಶ್ರೀಪತಿ ಉಪಾಧ್ಯಾಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತಾಡಿದರು.

LEAVE A REPLY

Please enter your comment!
Please enter your name here