ಧರ್ಮಸ್ಥಳ ಶ್ರೀ ಧ.ಮ.ಆಂ.ಮಾ ಶಾಲೆಯಲ್ಲಿ ಪೋಷಕರ ಸಮಾಲೋಚನ ಸಭೆ

0

ಧರ್ಮಸ್ಥಳ :ಶ್ರೀ.ಧ.ಮ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಎ.8ರಂದು ಪೋಷಕರ ಸಮಾಲೋಚನಾ ಸಭೆಯನ್ನು ಕರೆಯಲಾಯಿತು.

ಈ ಸಭೆಗೆ ಎಸ್.ಡಿ.ಎಮ್ ತಾಂತ್ರಿಕ ಮಹಾವಿದ್ಯಾಲಯ ಉಜಿರೆಯ ಮುಖ್ಯ ಗ್ರಂಥಪಾಲಕಿ ಡಾ.ರಜತ ಪಿ.ಶೆಟ್ಟಿ ಆಗಮಿಸಿ ಮಕ್ಕಳಿಗೆ ಓದುವ ಪ್ರವೃತ್ತಿಯನ್ನು ಹೇಗೆ ಅಭಿವೃದ್ಧಿ ಪಡಿಸಬೇಕು ಎಂಬುದನ್ನು ತಿಳಿ ಹೇಳಿದರು.

ಮಕ್ಕಳು ಮುಖ್ಯವಾಗಿ ಪುಸ್ತಕವನ್ನು ಪ್ರೀತಿಸಬೇಕು ಹಾಗೂ ಇಂದಿನ ಯುವ ಪೀಳಿಗೆಯು ದಾರಿ ತಪ್ಪುವುದನ್ನು ಪುಸ್ತಕ ತಡೆಗಟ್ಟುತ್ತದೆ ಎಂಬುದನ್ನು ಅನೇಕ ಉದಾಹರಣೆಗಳೊಂದಿಗೆ ತಿಳಿಸಿ ಹೇಳಿದರು.

ಈ ಕಾರ್ಯಕ್ರಮವನ್ನು ಮಹಿತ್ ಮತ್ತು ತಂಡದವರು ಪ್ರಾರ್ಥನೆಯೊಂದಿಗೆ ಆರಂಭಿಸಿ, ಶಾಲಾ ಮುಖ್ಯೋಪಾಧ್ಯಾಯನಿ ಪರಿಮಳ ಎಂ.ವಿ ಸ್ವಾಗತಿಸಿ, ಅಮೃತ ವಿ.ಶೆಟ್ಟಿ ಅತಿಥಿಗಳ ಪರಿಚಯ ನೀಡಿ, ದಿವ್ಯ ನಿರೂಪಿಸಿ, ಜಯವತಿ ಜೈನ್ ಕಾರ್ಯಕ್ರಮವನ್ನು ವಂದಿಸಿದರು.

LEAVE A REPLY

Please enter your comment!
Please enter your name here