ಸೋಕಿಲ ಜಿಸ್ತಿಯಾ ನಗರದಲ್ಲಿ ಆರನೇ ವಾರ್ಷಿಕ ಜಲಾಲಿಯಾ ರಾತೀಬ್

0

ಸೋಕಿಲ ಇಲ್ಲಿಯ ಜಿಸ್ತಿಯಾ ನಗರದಲ್ಲಿ ಆರನೇ ವಾರ್ಷಿಕ ಜಲಾಲಿಯಾ ರಾತೀಬ್ ಹಾಗೂ ನರಿಕ್ಕೋಡು ಉಪ್ಪಾಪ ಅನುಸ್ಮರಣೆ ಕಾರ್ಯಕ್ರಮ ಫೆ.16 ಮತ್ತು 17 ರಂದು ಎರಡು ದಿನಗಳಲ್ಲಿ ಮುಹಮ್ಮದ್ ಮುಸ್ತಫಾ ಝುಹ್ರಿ ಯವರ ಅಧ್ಯಕ್ಷತೆಯಲ್ಲಿ ಜರಗಿತು.

ಸೆಯ್ಯೆದ್ ಹಂಝ ತಂಙಳ್ ರವರು ಧ್ವಜಾರೋಹಣ ನೆರವೇರಿಸಿದರು.ನಂತರ ವಿವಿಧ ಮೌಲೀದ್ ಗಳು ರಿಫಾಯಿ ರಾತೀಬ್ ಕುತುಬಿಯ್ಯತ್, ನರಿಕ್ಕೋಡು ಉಪ್ಪಾಪ ಮಜ್ಲಿಸ್, ಜಲಾಲಿಯಾ ರಾತೀಬ್, ಅಸ್ಮಾವುಲ್ ಹುಸ್ನಾ ರಾತೀಬ್, ಬುರ್ದಾ ಮಜ್ಲಿಸ್, ಅಜ್ಮೀರ್ ಖವಾಲಿ, ಮುಹಿಯುದ್ದೀನ್ ಮಾಲೆ ಆಲಾಪಣೆ ಕಾರ್ಯಕ್ರಮ ನಡೆಯಿತು.

ಅಬ್ಬಾಸ್ ಅಹ್ಸನಿ ತೆನ್ನಲ ಅಬ್ಬಾಸ್ ಸ ಅದಿ ಉಸ್ತಾದ್ ಕೋಡಿ ನಿಝಾರ್ ಸಖಾಫಿ ಬಟ್ಟಿಪದವು, ಮುಹಮ್ಮದ್ ಮುಸ್ಲಿಯಾರ್ ಬಟ್ಟಿಪದವು ಡಿ ಹೆಚ್ ಎಸ್ ಎ ಬಟ್ಟಿಪದವು, ಸೆಯ್ಯೆದ್ ಹಂಝ ತಂಙಳ್ ಕರ್ಪಾಡಿ ಅತಾವುಲ್ಲಾ ಹಿಮಮಿ ಮೂರುಗೋಳಿ, ಅಶ್ರಫ್ ಸಖಾಫಿ ಮೂಡಡ್ಕ, ಉಸ್ಮಾನ್ ಸಖಾಫಿ ಕೊಟ್ರೆಪ್ಪಾಡಿ, ಅಬ್ದುಲ್ ಹಮೀದ್ ಸ ಅದಿ ಬೇಂಗಿಲ, ಪಿ ಕೆ ಉಸ್ಮಾನ್ ಅಧ್ಯಕ್ಷರು ಗ್ರಾಮ ಪಂಚಾಯತ್ ಬಾರ್ಯ, ಕಾಸಿಂ ಪದ್ಮುಂಜ, ಮುಹಮ್ಮದ್ ಅಲೀ ತುರ್ಕಲಿಕೆ, ಫೈಝಲ್ ಸದಸ್ಯರು ಗ್ರಾಮ ಪಂಚಾಯತ್ ಬಾರ್ಯ ಮುಹಮ್ಮದ್ ಹಾಜಿ ಅಧ್ಯಕ್ಷರು ಎಸ್ ವೈ ಎಸ್ ಬೇಂಗಿಲ, ಹಸನ್ ಸಖಾಫಿ ಮಯ್ಯಿಲ್, ಶರೀಫ್ ಮದನಿ, ಮುಹಮ್ಮದ್ ರಫೀಕ್ ಹಾಜಿ ಅಧ್ಯಕ್ಷರು ಜೆ ಎಂ ಬೇಂಗಿಲ, ಕಾರ್ಯದರ್ಶಿ ಹಂಝ ಬೇಂಗಿಲ, ಅಬ್ಬಾಸ್ ಮುಸ್ಲಿಯಾರ್ ಆಚಂಗಿ, ಹೆಚ್ ಅಶ್ರಫ್ ‌ಬಿ ಕೆ ಮುಹಮ್ಮದ್ ಹಾಜಿ ಅಧ್ಯಕ್ಷರು ಕೆ ಎಂ ಜೆ ಮೂರುಗೋಳಿ ಸರ್ಕಲ್, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

ಸಂಸ್ಥೆಯ ಕಾರ್ಯದರ್ಶಿ ಹಂಝ ಸೋಕಿಲ ಸ್ವಾಗತಿಸಿದರು.ಬೇಂಗಿಲ ಖತೀಬ್ ಹಬೀಬುರ್ರಹ್ಮಾನ್ ಅಹ್ಸನಿ ಉದ್ಘಾಟಿಸಿದರು.ಬಿ ಎಸ್ ಆದಂ ಮದನಿ ಸೋಕಿಲ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here