ಮೂಡುಕೋಡಿಯಲ್ಲಿ ರುದ್ರಭೂಮಿ ಕಾಮಗಾರಿ ಆರಂಭ

0

ವೇಣೂರು: ಮೂಡುಕೋಡಿ ಜನರ ಹಲವು ವಷ೯ಗಳ ಬೇಡಿಕೆ ಹಿಂದೂ ರುದ್ರ ಭೂಮಿ.ಗ್ರಾಮ ಪ೦ಚಾಯತ್ ಸದಸ್ಯ ಅನೂಪ್ ಜೆ ಪಾಯಸ್ ರವರ ಪ್ರಯತ್ನ ಹಾಗೂ ಪರಿಶ್ರಮ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷ ಧರ್ಮರಾಜ್ ಕೊಪ್ಪದಬಾಕಿಮಾರು ಇವರ ನೆರವಿನಿಂದ ಹೊಸಮನೆ ಮೂಡುಕೋಡಿ ಬಳಿ ಹಿಂದೂ ರುದ್ರ ಭೂಮಿ ಮ೦ಜೂರುಗೊ೦ಡು ದಾಖಲಾತಿಯಾಗಿ ಕಾಮಗಾರಿ ಆರಂಭಗೊಂಡಿದೆ.

ಈ ಭಾಗದ ಶವ ಸ೦ಸ್ಕಾರಕ್ಕೆ ಬಜಿರೆ ಹೋಗಬೇಕಾದ ಪರಿಸ್ಥಿತಿ ಇತ್ತು.ಗ್ರಾಮ ಪಂಚಾಯತ್ 15 ನೇ ಹಣಕಾಸಿನ ಅನುದಾನದಲ್ಲಿ ಅಧ್ಯಕ್ಷ ನೇಮಯ್ಯ ಕುಲಾಲ್, ಸದಸ್ಯರಾದ ಸು೦ದರ ಹೆಗ್ಡೆ, ಅನೂಪ್ ಜೆ. ಪಾಯಸ್ ಅನುದಾನ ಮ೦ಜೂರುಗೊಳಿಸಿ ಮೊದಲ ಹ೦ತದ ಕೆಲಸ ಆರ೦ಭಗೊ೦ಡಿದೆ.

LEAVE A REPLY

Please enter your comment!
Please enter your name here