ಮಂಜೊಟ್ಟಿ ಅಪಘಾತದಲ್ಲಿ ಸಾವಿಗೀಡಾದ ಧರಣೇಂದ್ರರವರ ಕುಟುಂಬಕ್ಕೆ ಸಹಾಯಧನ ವಿತರಿಸಿದ ಕೋಟ್ಯಾನ್ ಫ್ರೆಂಡ್ಸ್ ಬೆಳ್ತಂಗಡಿ

0

ಬೆಳ್ತಂಗಡಿ: ಇತ್ತೀಚೆಗೆ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟ ನಡ ಗ್ರಾಮದ ಮಂಜೊಟ್ಟಿ ನಿವಾಸಿ ಧರಣೇಂದ್ರ ಎಂಬ ಯುವಕನ ಕುಟುಂಬಕ್ಕೆ ಬೆಳ್ತಂಗಡಿಯ ಸಮಾಜಸೇವಕರಾದ ಸುರೇಂದ್ರ ಕೋಟ್ಯಾನ್ ರವರ ಕೋಟ್ಯಾನ್ ಫ್ರೆಂಡ್ಸ್ ಎಂಬ ವಾಟ್ಸಾಪ್ ಗ್ರೂಪ್ ತಂಡ ಒಟ್ಟು 18,500 ರೂಪಾಯಿ ಹಣವನ್ನು ಸಂಗ್ರಹಿಸಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಧರಣೇಂದ್ರ ರವರ ಹೆತ್ತವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಕೋಟ್ಯಾನ್ ಪ್ರೆಂಡ್ಸ್ ನ ಮುಖ್ಯಸ್ಥರಾದ ಸುರೇಂದ್ರ ಕೋಟ್ಯಾನ್, ಮೋಹನ್ ಶೆಟ್ಟಿ ಹರ್ಷ ಟೈಲರ್, ಸಂತೋಷ್ ಹೆಗ್ಡೆ ಬಳಂಜ, ಜಯ ಪೂಜಾರಿ ಲಾಯಿಲ, ಕೃಪೇಶ್ ಉಪಸ್ಥಿತರಿದ್ದರು.

ಕೋಟ್ಯಾನ್ ಪ್ರೆಂಡ್ಸ್ ಹಲವು ಜನಪರ ಕೆಲಸಗಳನ್ನು ಮಾಡುತ್ತಿದ್ದು ಬಡ ಕುಟುಂಬಗಳನ್ನು ಗುರುತಿಸಿ ತನ್ನಿಂದಾದ ಸಹಾಯಹಸ್ತವನ್ನು ನೀಡುತ್ತಾ ಬರುತ್ತಿರುವುದು ಸಮಾಜ ಮೆಚ್ಚುವ ಕಾರ್ಯವಾಗಿದೆ.

LEAVE A REPLY

Please enter your comment!
Please enter your name here