ಗೋಳಿಯಂಗಡಿ ಸ್ಫೋಟ ಪ್ರಕರಣ: ಮೃತ ಕುಟುಂಬಕ್ಕೆ ಕೆ.ಎಸ್.ಎಂ.ಸಿ.ಎ ಬೆಳ್ತಂಗಡಿಯಿಂದ ಸಹಾಯ ಹಸ್ತ

0

ಬೆಳ್ತಂಗಡಿ: ಜ.28ರ ಕುಕ್ಕೇಡಿ ಗೋಳಿಯಂಗಡಿ ಸ್ಫೋಟ ಪ್ರಕರಣದಲ್ಲಿ ಹಾನಿಗೀಡಾದ ಮನೆಗಳಿಗೆ ಕೆ.ಎಸ್.ಎಂ.ಸಿ.ಎ ತಂಡ ಭೇಟಿ ನೀಡಿತು.ಮೃತ ಪಟ್ಟ ಕಾರ್ಮಿಕ ವರ್ಗೀಸ್ ಕುಟುಂಬಕ್ಕೆ ಬೇಕಾದ ಎಲ್ಲಾ ಸಹಾಯವನ್ನು ನೀಡಲು ಕೆ.ಎಸ್.ಎಂ.ಸಿ.ಎ ಬೆಳ್ತಂಗಡಿಯಿಂದ ಸಹಾಯ ತಂಡವನ್ನು ರೆಜಿ ಜಾರ್ಜ್ ಪಡಂಗಡಿ ಇವರ ನೇತೃತ್ವದಲ್ಲಿ ರಚಿಸಲಾಯಿತು.

ಕೇರಳದ ಮನೆಯವರನ್ನು ಸಂಪರ್ಕಿಸಿ ಮೃತ ದೇಹದ ಗುರುತು ಹಾಗೂ ಊರಿಗೆ ದೇಹವನ್ನು ರವಾನಿಸುವ ವ್ಯವಸ್ಥೆಗೆ ಸಹಾಯ ಮಾಡಲಿದ್ದಾರೆ.

ಭೇಟಿ ತಂಡದಲ್ಲಿ ನಿರ್ದೇಶಕರಾದ ವಂದನಿಯ ಫಾ.ಶಾಜಿ ಮಾತ್ಯು ಪಿಆರ್ ಓ ಸೇಬಾಷ್ಟಿಯನ್ ಪಿ ಸಿ, ಉಜಿರೆ ಘಟಕಾಧ್ಯಕ್ಷ ಜೋಬಿ, ಬೆಳ್ತಂಗಡಿ ವಲಯ ಅಧ್ಯಕ್ಷ ರೆಜಿ ಜಾರ್ಜ್ ಹಾಗೂ ವೇಣೂರಿನ ಕೆ.ಎಸ್.ಎಂ.ಸಿ.ಎ ಸದಸ್ಯರು ಜೊತೆಯಲ್ಲಿದ್ದರು.

LEAVE A REPLY

Please enter your comment!
Please enter your name here