ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ನೂತನ ಸದಸ್ಯರಿಗೆ ಓರಿಯೆಂಟೇಶನ್ ಕಾರ್ಯಕ್ರಮ

0

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀ ಜೆಸಿ ಭವನದಲ್ಲಿ ತನ್ನ ಹೊಸ ಸದಸ್ಯರಿಗೆ ಓರಿಯೆಂಟೇಶನ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಜೆಸಿಯ ಮಿಷನ್, ದೃಷ್ಟಿಕೋನ ಮತ್ತು ಮೌಲ್ಯಗಳ ಬಗ್ಗೆ ಆಳವಾದ ಅರಿವನ್ನು ನೀಡುವುದರ ಜೊತೆಗೆ, ಸಂಸ್ಥೆಯ ರಚನೆ, ಆಡಳಿತ ಮತ್ತು ಒಳನೋಟಗಳ ಬಗ್ಗೆ ಸವಿವರವಾಗಿ ತರಬೇತಿಯನ್ನು ಹೊಸ ಸದಸ್ಯರಿಗೆ ಸಮುದಾಯದಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವುದು, ನೆಟ್‌ವರ್ಕಿಂಗ್ ಅವಕಾಶಗಳು ಮತ್ತು ಸಮುದಾಯದ ಪ್ರಭಾವವನ್ನು ಉತ್ತೇಜಿಸುವ ಜೆಸಿಐಯ ಬದ್ಧತೆಯನ್ನು ಅನುಭವಿ ಜೆಸಿಐ ವಲಯ ತರಬೇತುದಾರರಾದ ಸುಧೀರ್ ಕೆ ಎನ್ ಮತ್ತು ಶಂಕರ್ ರಾವ್ ನಡೆಸಿಕೊಟ್ಟರು.

ಘಟಕದ ಅಧ್ಯಕ್ಷರು ರಂಜಿತ್ ಎಚ್‌ ಡಿ, ಬಳಂಜ ಅಧ್ಯಕ್ಷತೆಯನ್ನು ವಹಿಸಿದ್ದರು.ಲೇಡಿ ಜೆಸಿ ಸಂಯೋಜಕಿ ಶ್ರುತಿ ರಂಜಿತ್, ಜೆಜೆಸಿ ಅಧ್ಯಕ್ಷ ಸಮನ್ವಿತ್ ಕುಮಾರ್, ಕಾರ್ಯಕ್ರಮದ ನಿರ್ದೇಶಕ ಚಂದ್ರಹಾಸ ಬಳಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೇದಿಕೆಗೆ ಪ್ರಮೋದ್ ಆಹ್ವಾನಿಸಿದರು.ಜೆಸಿ ವಾಣಿಯನ್ನು ರಾಮಕೃಷ್ಣ ವಾಚಿಸಿದರು ತರಬೇತುದಾರರ ಪರಿಚಯವನ್ನು ನೂತನ ಸದಸ್ಯರುಗಳಾದ ಆದರ್ಶ್ ಬಳಂಜ ಮತ್ತು ರಂಜನ್ ಧರ್ಮಸ್ಥಳ ವಾಚಿಸಿದರು . ಘಟಕದ ಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ನೂತನ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಅನುದೀಪ್ ಜೈನ್ ವಂದಿಸಿದರು.

LEAVE A REPLY

Please enter your comment!
Please enter your name here