ಬೆಳ್ತಂಗಡಿ: ಪಿ.ಎಂ ಸ್ವನಿಧಿ ಮತ್ತು ಸ್ವನಿಧಿ ಸೇ ಸಮೃದ್ಧಿ ಕುರಿತಾದ ಬೀದಿ ನಾಟಕ

0

ಬೆಳ್ತಂಗಡಿ: ಪಟ್ಟಣ ಪಂಚಾಯತ್, ಬೆಂಗಳೂರು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಆಶ್ರಯದಲ್ಲಿ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಜ.29ರಂದು ಪಿ.ಎಂ ಸ್ವನಿಧಿ ಮತ್ತು ಸ್ವನಿಧಿ ಸೇ ಸಮೃದ್ಧಿ ಕುರಿತು ಬೀದಿ ನಾಟಕ ಪ್ರದರ್ಶನಗೊಂಡಿತು.

ಈ ಕಾರ್ಯಕ್ರಮದಲ್ಲಿ ಆನ್ಲೈನ್ ಪಿಎಂ ಸ್ವನಿಧಿ ಅರ್ಜಿ ಸಲ್ಲಿಕೆ ಮತ್ತು ಸಾಲ ಮಂಜುರಾತಿ, ಡಿಜಿಟಲ್ ವ್ಯವಹಾರದೊಂದಿಗೆ ಜೋಡಣೆ ಮತ್ತು ಸಾಮಾಜಿಕ ಭದ್ರತೆ ಯೋಜನೆಗಳ ಜೋಡಣೆ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಕುರಿತು ಮಾಹಿತಿಯನ್ನು ನಾಟಕ ಹಾಗೂ ಪದ್ಯದ ಮೂಲಕ ತಿಳಿಸಲಾಯಿತು.ಸಂಸಾರ ಕಲಾ ತಂಡದ ಮುಖ್ಯಸ್ಥ, ಪತ್ರಕರ್ತ ಸಂಶುದ್ದೀನ್ ಸಂಪ್ಯ, ಸಂಸಾರ ಕಲಾ ತಂಡದ ಮುಖ್ಯಸ್ಥ ಕೃಷ್ಣಪ್ಪ ಬಂಬಿಲ, ಮೆಟಲ್ ಡಿಕೋಸ್ತ, ಉಷಾರಾಣಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here