ಬೆಳಾಲು: ಯಕ್ಷ ಮಾಣಿಕ್ಯ ಕಲಾ ಸಂಘ ಉದ್ಘಾಟನೆ

0

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಬೆಳಾಲು ಯಕ್ಷ ಮಾಣಿಕ್ಯ ಕಲಾ ಸಂಘ ಆರಂಭವಾಯಿತು. ಕಲಾ ಸಂಘದ ಉದ್ಘಾಟನೆಯನ್ನು ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ನೆರವೇರಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸಿದ್ದಪ್ಪ ಗೌಡ, ಕಾರ್ಯದರ್ಶಿ ಶಶಿಧರ ಕೆ.ಗೊಲ್ಲ, ಖಜಾಂಚಿ ದಿವಾಕರ ಬೈಪಾಡಿ ಮತ್ತು ಭಾಸ್ಕರ ಶರ್ಮ ಕೊಲ್ಪಾಡಿ, ನಾಟ್ಯಗುರು ದಿನೇಶ್ ಮಾರ್ಪಾಲು, ಜನಾರ್ದನ ಪೂಜಾರಿ ಶಾಂತಿಗುಡ್ಡೆ ರವಿ ಶಾಂತಿಗುಡ್ಡೆ, ಸುಮಿತ್ ಆಚಾರ್ ಅನಂತೋಡಿ, ಪ್ರಭಾಕರ ಮಾಪಲ ಮೊದಲಾದವರು ಉಪಸ್ಥಿತರಿದ್ದರು.

ಈದಿನ ನಾಟ್ಯ ತರಗತಿಯನ್ನೂ ಆರಂಭಿಸಲಾಯಿತು. ಪ್ರತೀ ಆದಿತ್ಯವಾರದಂದು ಉಚಿತ ಯಕ್ಷಗಾನ ನಾಟ್ಯ ತರಗತಿ ನಡೆಯಲಿದೆ ಎಂದು ಅಧ್ಯಕ್ಷರು ತಿಳಿಸಿದರು. ದಿನೇಶ್ ಮಾರ್ಪಾಲುರವರು ನಾಟ್ಯ ಗುರುಗಳಾಗಿ ನಾಟ್ಯ ತರಬೇತಿಯನ್ನು ನೀಡಲಿದ್ದಾರೆ.

LEAVE A REPLY

Please enter your comment!
Please enter your name here