ನಂದಗೋಕುಲ ಗೋಶಾಲೆಗೆ ಉದ್ಯಮಿ ಶಶಿಧರ ಶೆಟ್ಟಿ ರವರಿಂದ ವಿಶೇಷ ಕೊಡುಗೆ

0

ಕಳೆಂಜ: ಬರೋಡಾ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಅವರು ಕೆಲ ದಿನಗಳ ಹಿಂದೆ ಕಳೆಂಜ ಗ್ರಾಮದ  “ನಂದಗೋಕುಲ” ಗೋಶಾಲೆಗೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದು, ಗೋಶಾಲೆಯ ಗೋವುಗಳ ಮೇವಿನ ಅಗತ್ಯತೆ ಮನಗಂಡು ಗೋಶಾಲೆಗೆ ಅಡಿಕೆ ಹಾಳೆ ಕತ್ತರಿಸುವ ಯಂತ್ರವನ್ನು ಕೊಡುಗೆಯಾಗಿ ನೀಡುವ ಭರವಸೆಯಂತೆ  ರೂ.1,57,000 /- ಮೌಲ್ಯದ  ಅಡಿಕೆ ಹಾಳೆ ಕತ್ತರಿಸುವ ಯಂತ್ರವನ್ನು ಗೋಶಾಲೆಗೆ ಕೊಡುಗೆಯಾಗಿ ನೀಡಿರುತ್ತಾರೆ.

ಯಂತ್ರ ಖರೀದಿಯ ಮೌಲ್ಯದ ಚೆಕ್ಕನ್ನು ಅವರು ಡಾ.ಎಂ.ಎಂ.ದಯಾಕರ್ ಅವರಿಗೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟಿನ ಅಧ್ಯಕ್ಷ ಡಾ.ಎಂ.ಎಂ ದಯಾಕರ್, ಟ್ರಸ್ಟಿನ ಕಾರ್ಯದರ್ಶಿ ಸುಬ್ರಮಣ್ಯ ಕುಮಾರ್ ಅಗರ್ತ, ಶಶಿರಾಜ್ ಶೆಟ್ಟಿ ಮತ್ತು  ಜಗದೀಶ್ ಕಣ್ಣಾಜೆ ಉಪಸ್ಥಿತರಿದ್ದರು.

ಗೋಶಾಲೆಯ ಗೋವುಗಳಿಗೆ ಆಹಾರ ಒದಗಿಸಲು ಅನುಕೂಲವಾಗುವ ಯಂತ್ರವನ್ನು ಕೊಡುಗೆಯಾಗಿ ನೀಡಿದ ಉದ್ಯಮಿ ಶಶಿಧರ ಶೆಟ್ಟಿ ಅವರಿಗೆ ಡಾ.ಎಂ.ಎಂ.ದಯಾಕರ್ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here