ಕನ್ಯಾಡಿ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಅಯೋಧ್ಯ ರಾಮಮಂದಿರದ ಮಂತ್ರಾಕ್ಷತೆ ವಿತರಣೆ

0

ಕನ್ಯಾಡಿ: ಅಯೋಧ್ಯ ರಾಮಮಂದಿರ ಜ.24ರಂದು ಲೋಕಾರ್ಪಣೆಗೊಳ್ಳಲಿದ್ದು ಆ ಪ್ರಯುಕ್ತ ರಾಮ ಮಂದಿರದ ಮಂತ್ರಾಕ್ಷತೆಯನ್ನು ಡಿ.26ರಂದು ಕನ್ಯಾಡಿಯ ಹರಿಹರಾನುಗ್ರಹ ಸಭಾಭವನಕ್ಕೆ ಹೊಂದಿಕೊಂಡಿರುವ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಧರ್ಮಸ್ಥಳದ ಮುಳಿಕ್ಕಾರು, ನೆರ್ತನೆ, ಕೂಟದಕಲ್ಲು, ಜೋಡುಸ್ಥಾನ, ನಾರ್ಯ ಗ್ರಾಮದ ಜನರಿಗೆ ತಲುಪಿಸಲು ಆಯಾಯ ಗ್ರಾಮದ ಪ್ರಮುಖರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ಮನೋಹರ್ ರಾವ್ ಕನ್ಯಾಡಿ, ವಿಜಯ್ ಅರಳಿ, ಪ್ರೀತಮ್ ಧರ್ಮಸ್ಥಳ, ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಧನಲಕ್ಷ್ಮೀ ಜನಾರ್ಧನ್, ಶಾಂಭವಿ ರೈ, ಭಾಸ್ಕರ್ ಧರ್ಮಸ್ಥಳ, ಸುದ್ದಿ ಬಿಡುಗಡೆ ವರದಿಗಾರ ನಿಶಾನ್ ಬಂಗೇರ, ಸುಧಾಕರ್ ನಡುಗುಡ್ಡೆ, ಅಭಿಷೇಕ್ ಜೋಡುಸ್ತಾನ, ಸಂದೀಪ್ ರೈ, ರಾಮಚಂದ್ರ ಭಟ್, ಕಿಶೋರ್ ಭಂಡಾರಿ, ಸೂರ್ಯನಂದ ರಾವ್ ಪುದುಂಬಿಲ, ಭರತ್ ಕನ್ಯಾಡಿ, ಉಮಾನಾಥ್ ಮಿಳಿಕ್ಕಾರು, ಸುದರ್ಶನ್, ಮೊದಲಾದವರು ಉಪಸ್ಥಿತರಿದ್ದರು.

ಭಜನಾ ಮಂದಿರದ ಅರ್ಚಕರಾದ ಶ್ರೀಕಾಂತ್ ಭಟ್ ಮಂತ್ರಾಕ್ಷತೆಯನ್ನು ನೀಡಿದರು.

LEAVE A REPLY

Please enter your comment!
Please enter your name here