ಗುರುವಾಯನಕೆರೆ: 37ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ

0

ಗುರುವಾಯನಕೆರೆ: ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ (ರಿ.) ಅಯ್ಯಪ್ಪನಗರ, ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಮಿತಿಯ ವತಿಯಿಂದ ಡಿ.27ರಂದು ಗುರುವಾಯನಕೆರೆ ಅಯ್ಯಪ್ಪನಗರ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ವಠಾರದಲ್ಲಿ ವೇದಮೂರ್ತಿ ರಘುರಾಮ ಭಟ್ ಇವರ ಪೌರೋಹಿತ್ಯದಲ್ಲಿ 37ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಸುಕುಮಾರ ಗುರುಸ್ವಾಮಿ ಕಳೆಂಜ ಕಾರ್ಯತಡ್ಕ ಇವರ ನೇತೃತ್ವದಲ್ಲಿ ಜರಗಲಿರುವುದು.

ಬೆಳಿಗ್ಗೆ ಗಂಟೆ 10.00 ಗಂಟೆಗೆ ಶ್ರೀ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷ ಪೂಜೆ, ನಾಗತಂಬಿಲ, ಗುಡಿಯಲ್ಲಿ ಬೆಳಿಗ್ಗೆ 6.00 ಗಂಟೆಗೆ ಗಣಹೋಮ, ಬಳಿಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಭಗವಾನ್ ಶಿರಾಡಿ ಸತ್ಯಸಾಯಿ ಸೇವಾ ಕ್ಷೇತ್ರ ಹಳೆಕೋಟೆ ಬೆಳ್ತಂಗಡಿ ಇವರಿಂದ ಭಜನಾ ಕಾರ್ಯಕ್ರಮ, ಮಂಡಲಪೂಜೆ, ಸಂಜೆ ಗಂಟೆ 6.00ಕ್ಕೆ ಪಾಲೆಕೊಂಬು ಮೆರವಣಿಗೆ, ತನ್ನೀರಪ್ಪ ಸೇವೆ, ದೇವಿ ದರ್ಶನ, ಕೆಂಡಸೇವೆ, ಶ್ರೀ ಅಯ್ಯಪ್ಪ ವಾವರ ಯುದ್ಧ, ಸುಬ್ರಹ್ಮಣ್ಯ ದರ್ಶನ, ಪ್ರಸಾದ ವಿತರಣೆ ನಡೆಯಲಿದೆ.

ರಾತ್ರಿ ಗಂಟೆ 9.30ರಿಂದ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಮೇಳದವರಿಂದ ಅಪ್ಪೆ ಮಂತ್ರದೇವತೆ ಯಕ್ಷಗಾನ ಮೇಳ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here