ಮರ ಕಟ್ಟಿಂಗ್‌ ಮಾಡುವ ಸಮಯದಲ್ಲಿ ಕೆಳಗೆ ಬಿದ್ದ ಮೆಷಿನ್- ಕಟ್ಟಿಂಗ್‌ ಮೆಷಿನ್ ಕುತ್ತಿಗೆಗೆ ತಾಗಿ ಸಾವ್ಯದ ಪ್ರಶಾಂತ್‌ ಪೂಜಾರಿ ಮೃತ್ಯು

0

ಬೆಳ್ತಂಗಡಿ: ಮರ ಕಟ್ಟಿಂಗ್‌ ಮಾಡುವ ಸಮಯದಲ್ಲಿ ಮೆಷಿನ್‌ ಆಯತಪ್ಪಿ ಕೆಳಗೆ ಬಿದ್ದಿದ್ದು, ಚಾಲನ ಸ್ಥಿತಿಯಲ್ಲಿದ್ದ ಮೆಷಿನ್‌ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆಯೊಂದು ಬೆಳ್ತಂಗಡಿಯ ಸಾವ್ಯ ಗ್ರಾಮದಲ್ಲಿ ನಡೆದಿದೆ.

ಡಿ.19 ರ ಬೆಳಿಗ್ಗೆ 11.30 ರ ಸಮಯಕ್ಕೆ ಪ್ರಶಾಂತ್‌ ಪೂಜಾರಿ ಮತ್ತು ಸಹೋದರ ಪ್ರಮೋದ್‌ ಜೊತೆ ಮರ ಕಡಿಯುವ ಕಟ್ಟಿಂಗ್‌ ಮಿಷಿನ್‌ ಮೂಲಕ ಮರ ಕಡಿಯುವ ಸಮಯದಲ್ಲಿ ಪ್ರಶಾಂತ್‌ ಪೂಜಾರಿ ಕಟ್ಟಿಂಗ್‌ ಮಿಷಿನ್‌ ಜೊತೆ ಕೆಳಗೆ ಬಿದ್ದಿದ್ದು, ಚಾಲನಾ ಸ್ಥಿತಿಯಲ್ಲಿದ್ದ ಮೆಷಿನಿನ ಗರಗಸ ಆಕಸ್ಮಿಕವಾಗಿ ಕುತ್ತಿಗೆಗೆ ತಾಗಿ ತೀವ್ರ ರಕ್ತಸ್ರಾವ ಉಂಟಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.ಆದರೆ ಚಿಕಿತ್ಸೆ ಫಲಿಸದೆ ಪ್ರಶಾಂತ್‌ ಪೂಜಾರಿ ಅವರು ಇಂದು ಬೆಳಗ್ಗಿನ ಜಾವ ಸುಮಾರು 2 ಗಂಟೆಗೆ ಮೃತ ಹೊಂದಿದ್ದಾರೆ.

ಈ ಕುರಿತು ವೇಣೂರು ಪೊಲೀಸ್‌ ಠಾಣೆಯಲ್ಲಿ ಪ್ರಶಾಂತ್‌ ಅವರ ಸಹೋದರ ಪ್ರಮೋದ್‌ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here