ಓಡಿಲ್ನಾಳ ಮೈರಲ್ಕೆ ಶ್ರೀರಾಮ‌ನಗರ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಮಂತ್ರಣ ಪತ್ರಿಕೆ ಬಿಡುಗಡೆ‌ ಮತ್ತು ಜಾತ್ರಾಮಹೋತ್ಸವದ ಚಪ್ಪರ ಮಹೂರ್ತ ಕಾರ್ಯಕ್ರಮ

0

ಓಡಿಲ್ನಾಳ: ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀರಾಮ‌ನಗರ ಮೈರಲ್ಕೆ ಓಡಿಲ್ನಾಳ ಇಲ್ಲಿಯ ಪ್ರಥಮ ವರ್ಷದ ಜಾತ್ರಾಮಹೋತ್ಸವ ಡಿ.28 ರಿಂದ ಜ.1ರವರಗೆ ಜರಗಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ‌, ಜಾತ್ರಾಮಹೋತ್ಸವದ ಚಪ್ಪರ ಮಹೂರ್ತ ಹಾಗೂ ದೇವಸ್ಥಾನಕ್ಕೆ ನೂತನವಾಗಿ ನಿರ್ಮಿಸುವ ಕೆರೆಯ ಜಾಗದ ಮುಹೂರ್ತ ಕಾರ್ಯಕ್ರಮ ಡಿ.15ರಂದು ಜರಗಿತು.

ಈ ಸಂರ್ಭದಲ್ಲಿ ದೇವಸ್ಥಾನದ ಪ್ರಧಾನ‌ ಅರ್ಚಕ ಪ್ರಸನ್ನ ಭಟ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.ಆಡಳಿತ ಮಂಡಳಿ ಅಧ್ಯಕ್ಷ ಗೋಪಾಲ ಶೆಟ್ಟಿ ಕೋರ್ಯಾರು, ಕೆರೆ ನಿರ್ಮಿಸಲು ಜಾಗವನ್ನು ದಾನವಾಗಿ ನೀಡಿದ ಜಾಗದ ಮಾಲಕರು ವಸಂತಿ ಬಿ ಶೆಟ್ಟಿ ಮತ್ತು ಮಕ್ಕಳು ತುಂಗಾ ಆಸ್ಪತ್ರೆ ಮುಂಬಾಯಿ, ಕುವೆಟ್ಟು ಗ್ರಾ ಪಂ ಅಧ್ಯಕ್ಷೆ ಬಾರತಿ ಎಸ್ ಶೆಟ್ಟಿ, ಜಯರಾಮ್ ಶೆಟ್ಟಿ ಪಡಂಗಡಿ, ಜಯಪ್ರಕಾಶ್ ಸಂಪಿಗೆತ್ತಾಯ ಬಳ್ಳಮಂಜ, ಯುವ ಸಮಿತಿಯ ಅಧ್ಯಕ್ಷ ನಿತೇಶ್ ಕುಮಾರ್, ಕಾರ್ಯದರ್ಶಿ ಸುದೀಪ್ ಶೆಟ್ಟಿ, ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ವಿಮಲಾಕ್ಷ ಗೌಡ ಪಡ್ಪು, ಭಜನಾ ಮಂಡಳಿ ಅಧ್ಯಕ್ಷ ಯೋಗಿಶ್ ಕೊಡಂಗೆ, ದೇವಸ್ಥಾನದ ಟ್ರಸ್ಟಿನ ಸದಸ್ಯರು ಮೋಹನ್ ಭಟ್ ಮೈರಾರು, ವಾಮನ ಮೂಲ್ಯ ಮಡಂತಿಲ, ದೇವಿಪ್ರಸಾದ್ ಮೂಲೋಟ್ಟು, ಮೀನಾಕ್ಷಿ ಮೈರಲ್ಕೆ, ಗುರುರಾಜ್ ಪೊಡುಂಬ, ಸತೀಶ್ ಮೈರಲ್ಕೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here