ಬೆಳ್ತಂಗಡಿ: ವಾಣಿ ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆ

0

ಬೆಳ್ತಂಗಡಿ: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವತಿಯಿಂದ ಮೂಡಬಿದ್ರೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಕಲ್ಲಬೆಟ್ಟು ಇಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಾಣಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದು ಏಕಪಾತ್ರ ಅಭಿನಯದಲ್ಲಿ ದ್ವಿತೀಯ ಪಿಯುಸಿಯ ಋತ್ವಿಕ್ ಶೆಟ್ಟಿ ಮತ್ತು ಪ್ರಥಮ ಪಿಯುಸಿಯ ಸಾತ್ವಿಕ್ ಎಂ ಪ್ರಥಮ ಸ್ಥಾನವನ್ನು ಹಾಗೂ ಕನ್ನಡ ಪ್ರಬಂಧದಲ್ಲಿ ಪ್ರಥಮ ಪಿಯುಸಿಯ ಸುರಕ್ಷಿತ ಪ್ರಥಮ ಸ್ಥಾನವನ್ನು ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ದ್ವಿತೀಯ ಪಿಯುಸಿ ವಿಭಾಗದ ಆಶುಭಾಷಣದಲ್ಲಿ ನೆವಿಲ್ ನವೀನ್ ಮೋರಸ್ ದ್ವಿತೀಯ, ಜನಪದ ಗೀತೆಯಲ್ಲಿ ಧನುಷ್ ತೃತೀಯ, ಕನ್ನಡ ಪ್ರಬಂಧದಲ್ಲಿ ಶರಣ್ಯ ತೃತೀಯ ಹಾಗೂ ಪ್ರಥಮ ಪಿಯುಸಿ ವಿಭಾಗದ ಆಶುಭಾಷಣದಲ್ಲಿ ವಿಭಾ. ಕೆ. ಆರ್ ತೃತೀಯ, ಭಾವಗೀತೆಯಲ್ಲಿ ಸಮನ್ವಿತ್  ಕುಮಾರ್ ತೃತೀಯ, ಚರ್ಚಾ ಸ್ಪರ್ಧೆಯಲ್ಲಿ ಸಾಹಿತ್ಯ ಕುಶಾಲ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here