ಅಳದಂಗಡಿ: ವಾಹನ ಪೂಜೆ ಮತ್ತು ಪಿಲಿ ನಲಿಕೆ

0

ಅಳದಂಗಡಿ: ಇಲ್ಲಿನ ಬಸ್ ನಿಲ್ದಾಣ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ವಾಹನ ಪೂಜೆ ನಡೆಯಿತು.

ದಿನೇಶ್ ಪಿ.ಕೆ ಬಳಂಜ ಇವರ ಪೌರೋಹಿತ್ಯದಲ್ಲಿ ವಾಹನ ಪೂಜೆ ನಡೆಯಿತು.ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳ್ತೇದಾರರಾದ ಶಿವಪ್ರಸಾದ್ ಅಜಿಲರು, ರಿಕ್ಷಾ ಚಾಲಕ ಮಾಲಕ ಸಂಘದ ಮಾಜಿ ಗೌರವಾಧ್ಯಕ್ಷರಾದ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್, ನಾವರ ಪದ್ಮಾಂಬ ಕಾಂಪ್ಲೆಕ್ಸ್ ನ ಆದಿನಾಥ ಜೈನ್, ದಿಲೀಪ್ ಚಕ್ರವರ್ತಿ, ಆಶಾ ಕಾರ್ಯಕರ್ತೆ ಶಾರದಾ ಶೆಟ್ಟಿ, ತ್ರಿವೇಣಿ ಸ್ಟೋರ್ ಜನಾರ್ಧನ, ರಿಕ್ಷಾ ಚಾಲಕ ಮಾಲಕ ಸಂಘದ ನೂತನ ಅಧ್ಯಕ್ಷರಾದ ಕಿರಣ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಕಾರ್ಯದರ್ಶಿ ಕೊರಗಪ್ಪ ಕುಡ್ದಲಬೆಟ್ಟು, ಕೋಶಾಧಿಕಾರಿ ಇಸಾಕ್, ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಬದಲ್ಲಿ ಯೂನಿಯನ್ ಪ್ರಮುಖರಾದ ವಿಶ್ವನಾಥ್ ಹಾಗೂ ತಾಲೂಕು ಕಾರ್ಯದರ್ಶಿ ರಮೇಶ್ ಕುದ್ರಡ್ಕ ಮಾಹಿತಿ ನೀಡಿದರು.
ವಿಶೇಷ ಆಕರ್ಷಣೆ: ಸೇನೆರೆಬೈಲು ಡಾ.ಶಶಿಧರ ಡೋಂಗ್ರೆ ಇವರ ಪ್ರಾಯೋಜಕತ್ವದಲ್ಲಿ ಮೂಡಬಿದ್ರೆ ಅಲಂಗಾರು ಪಿಲಿತಂಡದಿಂದ ಪಿಲಿನಲಿಕೆ ಪ್ರಥಮ ಬಾರಿಗೆ ಅಳದಂಗಡಿ ಪೇಟಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಡಾ.ಶಶಿಧರ ಡೋಂಗ್ರೆ ಹಾಗೂ ಡಾ ಸುಷ್ಮಾ ಡೋಂಗ್ರೆ ಮಕ್ಕಳು ಉಪಸ್ಥಿತರಿದ್ದರು.

ಕಾರ್ಯಕ್ರಮ ಮುಗಿದ ತಕ್ಷಣ ಅಳದಂಗಡಿ ಪಾರ್ಕಿನ ಎಲ್ಲಾ ರಿಕ್ಷಾ ಚಾಲಕರು ಅಳದಂಗಡಿ ಸತ್ಯದೇವತೆ ದೇವಸ್ಥಾನದ ತನಕ ರಿಕ್ಷಾ ಸಂಚಾರ ಮಾಡಿದರು.

LEAVE A REPLY

Please enter your comment!
Please enter your name here