ಬಳಂಜ ಮನಸ್ವಿನಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಪದಗ್ರಹಣ, ಅಭಿನಂದನೆ

0

ಬಳಂಜ: ಮನಸ್ವಿನಿ ಸಂಜೀವಿನಿ ಒಕ್ಕೂಟ ಬಳಂಜ ಇದರ ವಾರ್ಷಿಕ ಮಹಾಸಭೆ ನ.10ರಂದು ಬಳಂಜ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಚಂದ್ರಾವತಿ ವಹಿಸಿದ್ದರು.

ಪಂಚಾಯತ್ ಅಧ್ಯಕ್ಷೆ ಶೋಭಾ ಕುಲಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸಭೆಯಲ್ಲಿ ಮನಸ್ವಿನಿ ಸಂಜೀವಿನಿ ಒಕ್ಕೂಟದ ಕಳೆದ 5 ವರ್ಷಗಳ ವರದಿಯನ್ನು MBK ವಿಮಲ ಮಂಡಿಸಿದರು.ಒಕ್ಕೂಟದ ಆಡಿಟ್ ವರದಿ ಮತ್ತು ಆರ್ಥಿಕ ವಹಿವಾಟಿನ ವಿವರವನ್ನು ಒಕ್ಕೂಟದ ನೂತನ ಕಾರ್ಯದರ್ಶಿ ಭಾರತಿ ಮಂಡಿಸಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಸಂಜೀವಿನಿ ಯೋಜನೆಯ ಮಹತ್ವ, ಮತ್ತು ಸದಸ್ಯರ ಜವಾಬ್ದಾರಿಗಳನ್ನು ವಿವರಿಸಿದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ ಯೋಜನೆಯ ದ್ಯೇಯೋದ್ಧೇಶಗಳನ್ನು ವಿವರಿಸಿದರು.

ವಲಯ ಮೇಲ್ವಿಚಾರಕ ಸ್ವಸ್ತಿಕ್ ಜೈನ್ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ನೆರವೇರಿಸಿದರು.ಪಂಚಾಯತ್ ಉಪಾಧ್ಯಕ್ಷ ಶಶಿಧರ್ ಶೆಟ್ಟಿ, ಸದಸ್ಯರಾದ ಹೇಮಂತ್, ಪ್ರಸನ್ನ, ಪದ್ಮಾವತಿ, ಯಕ್ಷಿತ ಉಪಸ್ಥಿತರಿದ್ದರು.

ಒಕ್ಕೂಟದ ನೂತನ ಅಧ್ಯಕ್ಷರಾಗಿ ಧನವತಿ ಹೆಗ್ಡೆ, ಕಾರ್ಯದರ್ಶಿಯಾಗಿ ಭಾರತಿ, ಉಪಾಧ್ಯಕ್ಷರಾಗಿ ಸವಿತಾ, ಜೊತೆ ಕಾರ್ಯದರ್ಶಿಯಾಗಿ ಅಶ್ವಿನಿ, ಕೋಶಾಧಿಕಾರಿಯಾಗಿ ಲತ, ಹಾಗೂ ಹತ್ತು ಸದಸ್ಯರನ್ನು ಆಡಳಿತ ಮಂಡಳಿಗೆ ಆಯ್ಕೆ ಮಾಡಲಾಯಿತು.

ಸಂಜೀವಿನಿ ಒಕ್ಕೂಟವು ಪಂಚಾಯತ್ ನ ಸ್ವಚ್ಚ ವಾಹಿನಿ ಮತ್ತು ಸ್ವಚ್ಛತಾ ಘಟಕವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು ಸ್ವಚ್ಚ ಸೇನಾನಿಗಳಾದ ಭಾರತಿ ಮತ್ತು ಸುಮಲತಾ ರನ್ನು ಗೌರವಿಸಲಾಯಿತು.ಅತ್ಯುತ್ತಮ ಪ್ರದರ್ಶನ ತೋರಿದ ಸಂಜೀವಿನಿ ಸಂಘ ಗಳಾದ ಸೌಭಾಗ್ಯ ಸ್ತ್ರೀ ಶಕ್ತಿ ಮತ್ತು ಧರ್ಮಶ್ರೀ ಸಂಜೀವಿನಿ ಸಂಘ ಗಳನ್ನು ಅಭಿನಂದಿಸಲಾಯಿತು.

ಒಕ್ಕೂಟದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಚಂದ್ರಾವತಿ ಮತ್ತು ನೂತನ ಅಧ್ಯಕ್ಷರನ್ನು ಗೌರವಿಸಲಾಯಿತು.ಸಂಜೀವಿನಿ ಸದಸ್ಯರಾದ ಪುಷ್ಪ ಗಿರೀಶ್ ಪ್ರಾರ್ಥಿಸಿದರು. ಬಿಸಿ ಸಖಿ ಸವಿತಾ ಸ್ವಾಗತಿಸಿದರು ಒಕ್ಕೂಟದ ಜೊತೆ ಕಾರ್ಯದರ್ಶಿ ಪುಷ್ಪ ಸತೀಶ್ ಕಾರ್ಯಕ್ರಮ ನಿರೂಪಿಸಿದರು.ಶ್ರೀ ದೇವಿ ಧನ್ಯವಾದವಿತ್ತರು.ಎಲ್.ಸಿ.ಆರ್.ಪಿ ಪೂರ್ಣಿಮಾ.ಪಿ ಮತ್ತು ಪಶು ಸಖಿ ಪೂರ್ಣಿಮ.ಕೆ ಸಹಕರಿಸಿದರು.

LEAVE A REPLY

Please enter your comment!
Please enter your name here