ಬೆಳ್ತಂಗಡಿ, ಉಜಿರೆಯ ಪಟಾಕಿ ಮಾರಾಟ ಮಳಿಗೆಗಳು ಮೈದಾನಕ್ಕೆ ಶಿಫ್ಟ್

0

ಬೆಳ್ತಂಗಡಿ: ಹಾವೇರಿ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಂಭವಿಸಿದ್ದ ಪಟಾಕಿ ದುರಂತಗಳ ಹಿನ್ನೆಲೆಯಲ್ಲಿ ಪಟಾಕಿ ಮಳಿಗೆಗಳನ್ನು ಮೈದಾನಗಳಲ್ಲಿಯೇ ಹಾಕುವಂತೆ ಜಿಲ್ಲಾಧಿಕಾರಿ ಅವರ ಸೂಚನೆಯಂತೆ ಬೆಳ್ತಂಗಡಿಯ ಪಟಾಕಿ ಮಾರಾಟದ ಮಳಿಗೆಗಳನ್ನು ಮಾರಿಗುಡಿ ದೇವಸ್ಥಾನದ ಬಳಿ ಇರುವ ಮೈದಾನಕ್ಕೆ ಮತ್ತು ಉಜಿರೆಯ ಪಟಾಕಿ ಮಾರಾಟದ ಮಳಿಗೆಗಳನ್ನು ಜನಾರ್ದನ ದೇವಸ್ಥಾನದ ಮುಂಭಾಗದ ಮೈದಾನಕ್ಕೆ ಶಿಫ್ಟ್ ಮಾಡಲಾಗಿದೆ.

ಖಾಯಂ ಮಳಿಗೆಗಳೂ ಶಿಫ್ಟ್: ನ.9ರಂದು ನಡೆದ ಸಭೆಯಲ್ಲಿ ತಾತ್ಕಾಲಿಕ ಪಟಾಕಿ ಮಳಿಗೆಗಳನ್ನು ಮೈದಾನಕ್ಕೆ ಶಿಫ್ಟ್ ಮಾಡಲು ಸೂಚಿಸಲಾಗಿದೆ.ಆದರೆ ಖಾಯಂ ಪರವಾನಿಗೆ ಇರುವ ಪಟಾಕಿ ಮಳಿಗೆಗಳನ್ನೂ ಮೈದಾನಕ್ಕೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here