ನಾಲ್ಕೂರು: ಬಾಲಸ್ನೇಹಿ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ

0

ನಾಲ್ಕೂರು: ಬಾಲಸ್ನೇಹಿ ಅಂಗನವಾಡಿ ಕೇಂದ್ರ ರಾಮನಗರ ನಾಲ್ಕೂರಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಪುಟಾಣಿ ಮಕ್ಕಳು ಪ್ರೀತಿಯ ಶಿಕ್ಷಕರಿಗೆ ಪೆನ್ನು, ಹೂ ನೀಡಿ ಗೌರವಿಸಿದರು. ಅಂಗನವಾಡಿ ಕೇಂದ್ರ ಶಿಕ್ಷಕರಾದ ಗೀತಾ ಟೀಚರ್ ಮತ್ತು ಸಹಾಯಕಿ ನಳಿನಿ ಮಕ್ಕಳೊಂದಿಗೆ ಮಕ್ಕಳಾಗಿ ಶಿಕ್ಷಕರ ದಿನದ ಖುಷಿಯನ್ನು ಹಂಚಿಕೊಂಡರು.

ಮಕ್ಕಳಿಗೆ ಶಿಕ್ಷಕರು ಏನು ಹೇಳಿದರೂ ಅದು ವೇದವಾಕ್ಯ. ಅಪ್ಪ- ಅಮ್ಮನಿಗಿಂತ ಹೆಚ್ಚು ನಂಬಿಕೆ, ವಿಶ್ವಾಸ ಶಿಕ್ಷಕರ ಮೇಲೆ ಇರುತ್ತೆ.ಜೊತೆಗೆ ಮಕ್ಕಳು ಶಿಕ್ಷಕರನ್ನು ಎಷ್ಟರ ಮಟ್ಟಿಗೆ ಅನುಸರಿಸುತ್ತಾರೆ ಎಂದರೆ ಶಿಕ್ಷಕರ ಗುಣ, ಹಾವ- ಭಾವ, ಉಡುಗೆ-ತೊಡುಗೆ, ವೃತ್ತಿ ನಿಷ್ಠೆ, ಸಮಯ ಪಾಲನೆ ಎಲ್ಲವನ್ನು ತಮಗರಿವಿಲ್ಲದೆ ತಮ್ಮದಾಗಿಸಿಕೊಳ್ಳುತ್ತಾರೆ.

LEAVE A REPLY

Please enter your comment!
Please enter your name here