ಮಂಗಳತೇರು ಸ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ಆಚರಣೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಗಳತೇರು ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಶಾಲಾ ನಾಯಕ ಲಿಖಿತ್ ರ ಕೋರಿಕೆಯಂತೆ ಶಾಲಾಭಿವ್ರಿದ್ಧಿ ಸಮಿತಿಯ ಅಧ್ಯಕ್ಷರಾದ ರವಿ ಉಲ್ತೂರು ದ್ವಜಾರೋಹಣವನ್ನು ನೆರವೇರಿಸಿ, ಸ್ವಾತಂತ್ರ್ಯಆಚರಣೆ ಮತ್ತು ದೇಶಭಕ್ತಿಯ ಬಗ್ಗೆ ಚುಟುಕಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಪುಟಾಣಿಗಳು, ಸ್ಥಳೀಯ ಧಾರ್ಮಿಕಮಂದಿರದ ಗುರುಗಳು, ಶಾಲಾಭಿಮಾನಿಗಳು, ಹಾಗೂ ಹಳೆ ವಿದ್ಯಾರ್ಥಿಗಳು ಭಾಗವಹಿಸಿ ಸಮಾರಂಭವನ್ನು ಚಂದಗಾಣಿಸಿಕೊಟ್ಟರು.

5ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸುಜನ್ಯ ರವರು ದ್ವಜಾರೋಹಣ ಕಾರ್ಯಕ್ರಮವನ್ನು ಬಹಳ ಸೊಗಸಾಗಿ ನಿರೂಪಿಸಿದರು.ಸಿಹಿತಿಂಡಿ, ವಿತರಣೆಯ ನಂತರ ವೇದಿಕೆಯಲ್ಲಿ ವಿದ್ಯಾರ್ಥಿ ತಂಷೀರ್ ನಿರೂಪಣೆಯೊಂದಿಗೆ ವಿದ್ಯಾರ್ಥಿಗಳಿಂದ ಮನೋರಂಜನ ಕಾರ್ಯಕ್ರಮವು ಜರುಗಿತು.

ಕಾರ್ಯಕ್ರಮದುದ್ದಕ್ಕೂ ನಿರೂಪಣೆಯನ್ನು ವಿದ್ಯಾರ್ಥಿಗಳೇ ನೆರವೇರಿಸಿರುವುದು ಎಲ್ಲರ ಮನಸೂರೆಗೊಂಡಿತು. ಮತ್ತು ಅದರ ಹಿಂದೆ ಇರುವ ಶಿಕ್ಷಕವೃಂದದವರ ಶ್ರಮ ಜನಮೆಚ್ಚುಗೆ ಗೆ ಕಾರಣವಾಯಿತು.

ಮಧ್ಯಾಹ್ನದ ಭೋಜನದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here