ಮಡಂತ್ಯಾರು: ಮಡಂತ್ಯಾರು – ಪುಂಜಾಲಕಟ್ಟೆ ವಾಣಿಜ್ಯ, ಕೈಗಾರಿಕೆ ಮತ್ತು ಸೇವಾ ಉದ್ದಿಮೆದಾರರ ಸಂಘದಿಂದ ಹೆದ್ದಾರಿ ಕಾಮಗಾರಿ ವಿಸ್ತರಣೆ ಬಗ್ಗೆ ಸಮಾಲೋಚನೆ ಸಭೆ

0

ಮಡಂತ್ಯಾರು : ಮಡಂತ್ಯಾರು – ಪುಂಜಾಲಕಟ್ಟೆ ವಾಣಿಜ್ಯ, ಕೈಗಾರಿಕೆ ಮತ್ತು ಸೇವಾ ಉದ್ದಿಮೆದಾರರ ಸಂಘದಿಂದ ಹೆದ್ದಾರಿ ಕಾಮಗಾರಿ ವಿಸ್ತರಣೆ ಬಗ್ಗೆ ಸಮಾಲೋಚನೆ ಸಭೆಯು ಜು.30ರಂದು ಮಡಂತ್ಯಾರು ಗ್ರಾಮ ಪಂಚಾಯತ್‌ ಸಭಾಭವನದಲ್ಲಿ ನಡೆಯಿತು.ಹೆದ್ದಾರಿ ಕಾಮಗಾರಿಯ ಬಗ್ಗೆ ಪೂರ್ವಭಾವಿಯಾಗಿ ವರ್ತಕರ ಸಮಾಲೋಚನಾ ಸಭೆಯಲ್ಲಿ ಕಾನೂನು ಮಾಹಿತಿಯನ್ನು ಬೆಳ್ತಂಗಡಿಯ ಪ್ರಖ್ಯಾತ ವಕೀಲರು ಬದ್ರಿನಾಥ್ ಸಂಪಿಗೆತ್ತಾಯ ಮಚ್ಚಿನ ಇವರು ನೀಡಿದರು.ಪ್ರಸ್ತುತ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯ ಮಾಹಿತಿ ಮತ್ತು ಪರಿಹಾರದ ಬೇಡಿಕೆಗಾಗಿ ವರ್ತಕರಲ್ಲಿರುವ ಗೊಂದಲಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ವರ್ತಕ ಬಂಧುಗಳು ಒಗ್ಗಟ್ಟಿನಿಂದ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ವರ್ತಕ ಬಂಧುಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಬಾಡಿಗೆ ಕರಾರಿನಲ್ಲಿ ಕಾರ್ಯಚರಿಸುತ್ತಿರುವ ವರ್ತಕರಿಗೆ ಗರಿಷ್ಠ ಪರಿಹಾರದ ಬೇಡಿಕೆಯನ್ನು ಸಭೆಯಲ್ಲಿ ಚರ್ಚಿಸಲಾಯಿತು.ಅಧ್ಯಕ್ಷರಾದ ಜಯಂತ್ ಶೆಟ್ಟಿ, ಕಾರ್ಯದರ್ಶಿ ತುಳಸಿ ದಾಸ್ ಪೈ, ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಪಾಲ್ಗೊಂಡರು.

LEAVE A REPLY

Please enter your comment!
Please enter your name here