ಉಜಿರೆ: ಗೌಡರ ಯಾನೆ ಒಕ್ಕಲಿಗರ ಕ್ರೀಡಾಕೂಟ

0

ಉಜಿರೆ : ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಉಜಿರೆ ಇದರ ಆಶ್ರಯದಲ್ಲಿ ಜು.9 ರಂದು ಉಜಿರೆಯಲ್ಲಿ ಕ್ರೀಡಾಕೂಟ ಜರಗಿತು.

ಬೆನಕ ಕನ್ಸ್ಟ್ರಕ್ಷನ್ ನ ಇಂಜೀನಿಯರ್ ಗಣೇಶ್ ಗೌಡ ಕ್ರೀಡಾಕೂಟ ಉದ್ಘಾಟಿಸಿ ಶುಭ ಹಾರೈಸಿದರು.

ಗೌಡರ ಯಾನೆ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಸವಣಾಲು,ಸುಂದರಿ ಸೂರಪ್ಪ ಗೌಡ ಕಿರಿಯಾದಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಗ್ರಾಮ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ಧರಣಿ,ಗೌರವ ಅಧ್ಯಕ್ಷ ಪ್ರಕಾಶ್ ಗೌಡ ಅಪ್ರಮೇಯ, ಕಾರ್ಯದರ್ಶಿ ಶೇಖರ ಗೌಡ,ಯುವ ಅಧ್ಯಕ್ಷ ಸೋಮಶೇಖರ್ ಕೆ.,ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸಮಾಜ ಭಾಂಧವರು ಉಪಸ್ಥಿತರಿದ್ದರು. ಬಳಿಕ ವಿವಿಧ ಕ್ರೀಡಾಕೂಟ ಜರಗಿತು.

ಉಮೇಶ್ ಗೌಡ ಶಿವಾಜಿನಗರ ನಗರ ಸ್ವಾಗತಿಸಿ, ಸೋಮಶೇಖರ್ ವಂದಿಸಿದರು.ಶ್ರೀ ಧ. ಮ. ನ್ಯಾಚುರೋಪತಿ ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ಧರ್ಮೇ0ದ್ರ ಕುಮಾರ್ ನಿರೂಪಿಸಿದರು

LEAVE A REPLY

Please enter your comment!
Please enter your name here