ಭಜನಾ ಪರಿಷತ್ ಉಜಿರೆ ವಲಯ ಭಜನಾ ಮಂಡಳಿಗಳ ಸಭೆ

0

ಉಜಿರೆ : ಬೆಳ್ತಂಗಡಿ ತಾಲೂಕು ಭಜನಾ ಪರಿಷತ್ ಉಜಿರೆ ವಲಯದ ಭಜನಾ ಮಂಡಳಿಗಳ ಸಭೆ ಜೂ.25 ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾ ಮಂಟಪ ಉಜಿರೆಯಲ್ಲಿ ನಡೆಯಿತು.
ಬೆಳ್ತಂಗಡಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ವೆಂಕಟೇಶ್ವರ ಭಟ್ ಕಜೆ ಇವರು ಮಾತನಾಡಿ ನಮ್ಮ ಭಜನಾ ಮಂಡಳಿಗಳು ಪ್ರಾರಂಭವಾಗಲು ಕಾರಣಕರ್ತರಾದ ಅಂದಿನ ಹಿರಿಯರ ಹೆಸರುಗಳನ್ನು ಮಂಡಳಿಯ ದಾಖಲಾತಿ ಪುಸ್ತಕದಲ್ಲಿ ಬರೆದು ಇಟ್ಟು ಅದು ಮುಂದಿನ ಪೀಳಿಗೆಗಳಿಗೆ ತಿಳಿಯುವಂತಾಗಬೇಕು ಹಾಗೂ ಹಿರಿಯರು ಭಜನೆಗೆ ಹಾಕಿಕೊಟ್ಟ ಅಡಿಪಾಯಕ್ಕೆ ನಾವು ಚ್ಯುತಿ ಬಂದು ಲಯ ತಪ್ಪದಂತೆ ಜಾಗೃತೆ ವಹಿಸಬೇಕಾಗಿದೆ ಮತ್ತು ನಾವು ಆದಷ್ಟು ನಮ್ಮ ಮಕ್ಕಳಿಗೆ ಧರ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು ಎಂದರು.


ಪರಿಷತ್ತಿನ ಕಾರ್ಯದರ್ಶಿ ಪಿ.ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು ಭಾಗವಹಿಸಿ ಭಜನ ಮಂಡಳಿ ನೋಂದಾವಣಿ ನವೀಕರಣ ಜಾಗದ ರೆಕಾರ್ಡ್ ವಲಯದ ಭಜನಾ ಮಂಡಳಿಗಳು ಒಟ್ಟು ಸೇರಿ ಕೆಲವೊಂದು ಕಾರ್ಯಕ್ರಮಗಳನ್ನು ಮಾಡುವ ಬಗ್ಗೆ ಮಂಡಳಿಯಲ್ಲಿರುವ ಕುಂದು ಕೊರತೆಗಳ ಬಗ್ಗೆ ಭಜನಾ ಮಂಡಳಿ ಅಧ್ಯಕ್ಷ ಕಾರ್ಯದರ್ಶಿಯಲ್ಲಿ ವಿಮರ್ಶೆ ನಡೆಸಿ ಸೂಕ್ತ ಮಾಹಿತಿ ಮಾರ್ಗದರ್ಶನವನ್ನು ನೀಡುತ್ತಾ ತಾಲೂಕಿನಲ್ಲಿ ಭಜನಾ ಪರಿಷತ್ತು ಉತ್ತಮ ಕಾರ್ಯ ಚಟುವಟಿಕೆಗಳನ್ನು ಮಾಡಲು ಎಲ್ಲಾ ಭಜನಾ ಮಂಡಳಿಗಳ ಸಹಕಾರವನ್ನು ಕೇಳಿದರು.
ಕಾರ್ಯಕ್ರಮದಲ್ಲಿ ಭಜನಾ ಪರಿಷತ್ತಿನ ವಲಯ ಸಂಯೋಜಕ ಸದಾಶಿವ ಗೌಡ ಬೆಳಾಲು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯದ ಮೇಲ್ವಿಚಾಕರು ,ಸೇವಾ ಪ್ರತಿನಿಧಿಯವರು ಭಜನಾ ಮಂಡಳಿಗಳ ಅಧ್ಯಕ್ಷ ಕಾರ್ಯದರ್ಶಿಯವರು ಉಪಸ್ಥಿತರಿದ್ದರು ವಲಯದ ಮೇಲ್ವಿಚಾರಕರಾದ ಶ್ರೀಮತಿ ವನಿತಾ ರವರು ಸ್ವಾಗತಿಸಿದರು ಹಾಗೂ ಸೇವಾ ಪ್ರತಿನಿಧಿ ಆಶಾ ವಂದಿಸಿದರು.

LEAVE A REPLY

Please enter your comment!
Please enter your name here