ಪಿಕ್ಅಪ್ ವಾಹನ ತಡೆಗಟ್ಟಿ ಜೀವಬೆದರಿಕೆ ಒಡ್ಡಿದ ಆರೋಪ : ಮೆಸ್ಕಾಂ ಉದ್ಯೋಗಿಗೆ ಜಾಮೀನು

0

ಬೆಳ್ತಂಗಡಿ: ಲಾಯಿಲ ಪಡ್ಲಾಡಿ ಗ್ರಾಮದ ಚಂದ್ರಕಾಂತ್ ಎಂಬ ಪಿಕ್ ಅಪ್ ಚಾಲಕನನ್ನು ಅಡ್ಡಗಟ್ಟಿ ಜೀವಬೆದರಿಕೆ ಒಡ್ಡಿದ ಆರೋಪದಡಿ ಚಂದ್ರಕಾಂತ್ ಅವರು ಬೆಳ್ತಂಗಡಿ ಪೊಲೀಸರಿಗೆ ನೀಡಿದ ದೂರಿನಂತೆ ಹುಣ್ಸೇಕಟ್ಟೆ ನಿವಾಸಿ ಅಭಿಷೇಕ್ ಎಂಬವರ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಠಾಣಾ ಅಕ್ರ 44/2023 ಯು/ಎಸ್ 341, 323,506 ಐಪಿಸಿ ಮತ್ತು ಕಲಂ 3(1) (ಎಸ್) ಎಸ್.ಸಿ, ಎಸ್.ಟಿ ಅಕ್ಟ್-2015ರಂತೆ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಆರೋಪಿತ ಅಭಿಷೇಕ್ ಅವರು ಜೂನ್ 16 ರಂದು ಮಾನ್ಯ ಜಿಲ್ಲಾ ನ್ಯಾಯಾಲಯಕ್ಕೆ ಶರಣಾದಂತೆ ಜಾಮೀನು ಮಂಜೂರುಗೊಂಡಿರುತ್ತದೆ. ಇವರ ಪರವಾಗಿ ನ್ಯಾಯವಾದಿಗಳಾದ ಬೆಳ್ತಂಗಡಿಯ ಸಂತೋಷ್ ಕುಮಾರ್ ಲಾಯಿಲ ಹಾಗೂ ಮಂಗಳೂರಿನ ಸತೀಶ್ ಅವರು ವಾದಿಸಿದ್ದರು.

LEAVE A REPLY

Please enter your comment!
Please enter your name here