ಪಂಚಮಿ ಭೋಜಾರಜ್ ವಾಮಂಜೂರು ಸರ್ಕಸ್ ತುಳು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ

0

ಮಂಗಳೂರು: ತುಳು ರಂಗಭೂಮಿ ಹಾಗೂ ಚಲನಚಿತ್ರ ರಂಗದ ಜನಪ್ರಿಯ ನಟರಾದ ಭೋಜಾರಜ್ ವಾಮಂಜೂರು ಹಾಗೂ ವಾಣಿ ವಾಮಂಜೂರುರವರ ಪುತ್ರಿ ಪಂಚಮಿ ಬಿ.ವಾಮಂಜೂರು ಸರ್ಕಸ್ ತುಳು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಇದೇ ತಿಂಗಳು ಜೂನ್ 23 ಕ್ಕೆ ವಿಶ್ವದಾದ್ಯಂತ ಬಿಡುಗಡೆ ಯಾಗುತ್ತಿರುವ ಬಿಗ್ ಬಾಸ್ ವಿಜೇತರಾದ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಾಯಕ ನಟರಾಗಿ ಹಾಗೂ ನಿರ್ದೇಶನದ ಬಹುನಿರೀಕ್ಷಿತ ಸರ್ಕಸ್ ತುಳು ಚಲನಚಿತ್ರದಲ್ಲಿ ರೂಪೇಶ್ ಶೆಟ್ಟಿ ಅವರ ತಂಗಿಯ ಪಾತ್ರದಲ್ಲಿ ಪಂಚಮಿ ವಾಮಂಜೂರು ನಟಿಸಿದ್ದಾರೆ.
ಭರತನಾಟ್ಯ, ನೃತ್ಯ , ನಿರೂಪಣೆ, ಸಹಿತ ಅನೇಕ ಕ್ಷೇತ್ರಗಳಲ್ಲಿ ಮತ್ತು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತೀರವ ಪಂಚಮಿ ವಾಮಂಜೂರು ಬಹುಮುಖ ಪ್ರತಿಭೆಯಾಗಿರುತ್ತಾರೆ .

LEAVE A REPLY

Please enter your comment!
Please enter your name here