ಅಳದಂಗಡಿ: ನಿಸ್ವಾರ್ಥ ಸೇವೆಗೆ ಸ್ಪೂರ್ತಿಯ ಸೆಲೆಯಾದ ರವಿ ಕಟಪಾಡಿ- ಕೀರ್ತನ್ ಅವರ ವೈದ್ಯಕೀಯ ಚಿಕಿತ್ಸೆಗೆ ರೂ.10 ಸಾವಿರ ಹಸ್ತಾಂತರ

0

ಅಳದಂಗಡಿ: ಶ್ರೀ ಸತ್ಯದೇವತೆ ದೈವಸ್ಥಾನದಲ್ಲಿ ನಡೆದ ಪುಸ್ತಕ ವಿತರಣೆಯ ಸಮಾರೋಪ ಸಮಾರಂಭದಲ್ಲಿ ಸಮಾಜ ಸೇವಕ ರವಿ ಕಟಪಾಡಿ ಯವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವಪ್ರಸಾದ್ ಅಜಿಲರು ರವಿ ಕಟಪಾಡಿಯವರ ಸಮಾಜಮುಖಿ ಕೆಲಸಕಾರ್ಯಕ್ಕೆ ದೈವಸ್ಥಾನದ ವತಿಯಿಂದ 10,000/- ರೂ ಗಳನ್ನು ಅಶಕ್ತರಿಗೆ ನೀಡಿ ಇದೊಂದು ನಮ್ಮ ಪುಟ್ಟ ಅಳಿಲು ಸೇವೆ ಎಂದರು.ಇದನ್ನು ಸ್ವೀಕರಿಸಿದ ರವಿಕಟಪಾಡಿಯವರು ಕೆಲವೇ ಕೆಲವು ಹೊತ್ತಿನಲ್ಲಿ ವೇದಿಕೆಯಿಂದ ಕೆಳಗಿಳಿಯುತ್ತಲೆ ಅಳದಂಗಡಿ ಪರಿಸರದ ಅನಾರೊಗ್ಯದಿಂದ ಬಳಲುತ್ತಿರುವ ಕೀರ್ತನ್ ಇವರಿಗೆ ಆ ಮೊತ್ತವನ್ನು ಹಸ್ತಾಂತರಿಸಿದರು.ನಿಜವಾಗಿಯು ರವಿಕಟಪಾಡಿಯವರು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಒಂದಷ್ಟು ಕ್ಷಣ ಯೋಚಿಸದೆ ಆ ಕ್ಷಣವೆ ಮಿಡಿದ ಮನಸ್ಸಿಗೆ ನಾವುಗಳು ಮೂಕವಿಸ್ಮಿತರಾದೆವು.ರವಿ ಕಟಪಾಡಿ ಅವರಿಗೆ ಅಳದಂಗಡಿಯ ಶ್ರೀ ಸತ್ಯದೇವತೆ ಹಾಗೂ ಶ್ರೀ ಸೋಮನಾಥೇಶ್ವರಿ ಅಮ್ಮನವರ ಶ್ರೀ ರಕ್ಷೆ ಸದಾ ಕಾಲ ಇರಲೆಂದು ಅಲ್ಲಿ ನೆರೆದಿದ್ದ ಅಳದಂಗಡಿಯ ಯುವಕರು ಆಶಿಸಿದರು.

LEAVE A REPLY

Please enter your comment!
Please enter your name here