ಮಿತ್ತಬಾಗಿಲು ಗ್ರಾ.ಪಂ.ನಲ್ಲಿ ಪ್ರಧಾನ ಮಂತ್ರಿ ಜೀವನ್ ಬಿಮಾ ಸುರಕ್ಷಾ ಯೋಜನೆಯ ನೋಂದಾವಣೆ-ಅಮೂಲ್ಯ ಸಾಕ್ಷರತಾ ಕೇಂದ್ರ-ಸಂಜೀವಿನಿ ಸದಸ್ಯರ ಸಾಥ್

0

ಮಿತ್ತಬಾಗಿಲು: ಜಿಲ್ಲಾ ಪಂಚಾಯತಿ ಆದೇಶದ ಪ್ರಕಾರ ಮೇ 22 ರಿಂದ ಜೂನ್ 16ರವರೆಗೆ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಪ್ರಧಾನ ಮಂತ್ರಿ ಜೀವನ್ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ಮಾಹಿತಿಯನ್ನು ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಮೂಲಕ ಮಿತ್ತಬಾಗಿಲು ಜನರಿಗೆ ತಲುಪಿಸಲಾಗುತ್ತಿದೆ.

ಇದರ ಜೊತೆ ನೋಂದಾವಣೆ ಕಾರ್ಯವನ್ನು ನಡೆಸುತ್ತಿದ್ದಾರೆ. ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕಿ ಉಷಾ ನಾಯಕ್, ಸಂಜೀವಿನಿ ಎಂ ಬಿ ಕೆ ಸುಷ್ಮಾ, ಬ್ಯಾಂಕ್ ಸಖಿ ಪ್ರತಿಮಾ, ಎಲ್ ಸಿ ಆರ್ ಪಿ ವಿನೋದಾ, ಸಂಘದ ಸದಸ್ಯರು ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.

LEAVE A REPLY

Please enter your comment!
Please enter your name here