ಧರ್ಮಸ್ಥಳದ ಕೆ ಎಸ್ ಆರ್ ಟಿ ಸಿ ಸಿಬ್ಬಂದಿ ಅಜಿಕುರಿ ನಿವಾಸಿ ರಾಘವ್ ಗೌಡರಿಗೆ ಬೀಳ್ಕೊಡುಗೆ -ಮಂಗಳೂರಿನಲ್ಲಿ ಸನ್ಮಾನ

0

ಮಂಗಳೂರು- ಕೆ ಎಸ್ ಆರ್ ಟಿ ಸಿಯಲ್ಲಿ 31 ವರ್ಷಗಳ ಸೇವೆ ಸಲ್ಲಿಸಿರುವ ಮಂಗಳೂರು ವಿಭಾಗದ ಸಿಬ್ಬಂದಿ ಧರ್ಮಸ್ಥಳದ ನೇತ್ರಾವತಿಯ ಅಜಿಕುರಿ ನಿವಾಸಿ ರಾಘವ್ ಗೌಡರಿಗೆ ಮೇ 31 ರಂದು ಬೀಳ್ಕೋಡುಗೆ ಕಾರ್ಯಕ್ರಮ ಏರ್ಪಡಿಸಿ ಸನ್ಮಾನಿಸಲಾಯಿತು.

ಮಂಗಳೂರು ವಿಭಾಗ ಎರಡನೇ ಘಟಕದಲ್ಲಿ ಘಟಕ ವ್ಯವಸ್ಥಾಪಕ ಕರುಣಾಕರ ಪಡುಕೋಣೆ, ಘಟಕದ ಅಧೀಕ್ಷಕ ಮಂಜುನಾಥ್ ಇವರ ನೇತೃತ್ವದಲ್ಲಿ ಬೀಳ್ಕೋಡುಗೆ ಕಾರ್ಯಕ್ರಮ ನಡೆಯಿತು.
ಇವರು ವೋಲ್ವೋ ಡಿಪೋದಲ್ಲಿ ಚಾಲಕನಾಗಿ ಸೇವೆ ಸಲ್ಲಿಸಿದ್ದು, ಇವರ ಚಾಲನೆಯ ನೈಪುಣ್ಯತೆಗೂ ಪ್ರತೀತಿ ಪಡೆದಿದ್ದಾರೆ.ಇವರು ಹೆಂಡತಿ ಮೋಹಿನಿ, ಮಕ್ಕಳಾದ ರಾಮಚಂದ್ರ, ಮಧು, ಮಹೇಶರೊಂದಿಗೆ ನಿವೃತ್ತಿಯ ಜೀವನವನ್ನು ನೇತ್ರಾವತಿಯ ಅಜಿಕುರಿಯಲ್ಲಿ ನಡೆಸಲಿದ್ದಾರೆ.

LEAVE A REPLY

Please enter your comment!
Please enter your name here