ಬೆಳ್ತಂಗಡಿ : ಲಾಯಿಲದಲ್ಲಿ ರಿಕ್ಷಾ ಹಾಗೂ ಟೆಂಪೋ ನಡುವೆ ಡಿಕ್ಕಿ-ಪ್ರಾಣಾಪಾಯದಿಂದ ಪಾರು- ಖಾಸಗಿ ಆಸ್ಪತ್ರೆಗೆ ದಾಖಲು

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಸೈಂಟ್ ಮೇರಿಸ್ ಶಾಲೆಯ ಹತ್ತಿರ ಮೇ.29ರಂದು ನಡೆದಿದೆ.

ರಿಕ್ಷಾದಲ್ಲಿ ಸಹಪ್ರಯಾಣಿಕರನ್ನಾಗಿ ಶೇಖರ ಶೆಟ್ಟಿ, ಮಂಜುನಾಥ ನಾಯಕ್‌ ಎಂಬುವವರನ್ನು ಕುಳ್ಳಿರಿಸಿಕೊಂಡು ಉಜಿರೆ-ಬೆಳ್ತಂಗಡಿ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ ವೇಳೆಗೆ ಬೆಳ್ತಂಗಡಿ ತಾಲೂಕು ಲಾಯಿಲಾ ಗ್ರಾಮದ ಸೈಂಟ್ ಮೇರಿಸ್ ಶಾಲೆಯ ಬಳಿ ತಲುಪುತ್ತಿದ್ದಂತೆ ವಿರುದ್ದ ದಿಕ್ಕಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಉಜಿರೆ ಕಡೆಗೆ ಟೆಂಪೋ ಟ್ರಾವೆಲರ್‌ ವಾಹನವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ.

ಈ ದುರ್ಘಟನೆಯ ವೇಳೆ ಹಣೆಗೆ, ಎದೆಗೆ, ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಾಯ, ಮಂಜುನಾಥ ನಾಯಕ್‌ರವರಿಗೆ ತುಟಿಗೆ ಎಡಕಣ್ಣಿನ ಬಳಿ ತರಚಿದ ಗಾಯ, ಎಡ ಕೈ ಭುಜಕ್ಕೆ ಗುದ್ದಿದ ಗಾಯ, ಶೇಖರ ಶೆಟ್ಟಿಯವರಿಗೆ ಹಣೆಗೆ, ತಲೆಗೆ, ರಕ್ತಗಾಯ, ಎಡ ಕೈ ಭುಜಕ್ಕೆ, ಎಡ ಮೊಣಕೈಗೆ ತರಚಿದ ಗಾಯ, ಎಡಕಾಲಿನ ಮೊಣಗಂಟಿಗೆ ಗುದ್ದಿದ ಗಾಯಗೊಂಡು ಚಿಕಿತ್ಸೆಗೆ ಉಜಿರೆ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಈ ಪ್ರಕರಣವು ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ ದಾಖಲಾಗಿದೆ.

LEAVE A REPLY

Please enter your comment!
Please enter your name here